ಮಂಡ್ಯ; ಭೂ ವಿವಾದದಲ್ಲಿ 65 ವರ್ಷದ ವೃದ್ಧೆ ಮೇಲೆ ಹಲ್ಲೆ, ನಾಲ್ವರ ವಿರುದ್ಧ ಕೇಸು ದಾಖಲು

ಅರವತ್ತೈದು ವರ್ಷದ ವೃದ್ಧೆಯನ್ನು ದರೋಡೆ ಮಾಡಿ ನಾಲ್ವರು ವ್ಯಕ್ತಿಗಳು ಹೊಡೆದ ಪ್ರಕರಣ ಮಂಡ್ಯ ಜಿಲ್ಲೆಯ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಮಂಡ್ಯ: ಅರವತ್ತೈದು ವರ್ಷದ ವೃದ್ಧೆಯನ್ನು ದರೋಡೆ ಮಾಡಿ ನಾಲ್ವರು ವ್ಯಕ್ತಿಗಳು ಹೊಡೆದ ಪ್ರಕರಣ ಮಂಡ್ಯ ಜಿಲ್ಲೆಯ ಮರ್ದಿಪುರ ಜಿಲ್ಲೆಯ ದುಡ್ಡ ಹೋಬಳಿಯಲ್ಲಿ ನಡೆದಿದೆ.
ಆರೋಪಿಗಳಲ್ಲಿ ಮಹಿಳೆ ಸೇರಿ ನಾಲ್ವರಿದ್ದು ಭೂ ವಿವಾದಕ್ಕೆ ಸಂಬಂಧಿಸಿದಂತೆ ಈ ಜಗಳ ನಡೆದಿದೆ.
ಮೃತ ನಿಂಗಯ್ಯ ಎಂಬವರ ಪತ್ನಿ ಏಟು ತಿಂದ ಸಣ್ಣ ಬೆಟ್ಟಮ್ಮ ಪೊಲೀಸರಿಗೆ ದೂರು ನೀಡಿದ್ದಾರೆ. ಸ್ವಾಮಿ ಮತ್ತು ಆತನ ಪತ್ನಿ ಗೌರಮ್ಮ ಹಾಗೂ ಮಕ್ಕಳಾದ ಮಧುಕುಮಾರ್ ಮತ್ತು ಮನು ಅದೇ ಗ್ರಾಮದವರಾಗಿದ್ದು ಮನೆಯ ಹೊರಗೆ ಕಂಬಕ್ಕೆ ಕಟ್ಟಿ ಹಾಕಿ ಹಲ್ಲೆ ನಡೆಸಿದ್ದಾರೆ. ಗ್ರಾಮದ ನರಸೀಪುರದ ಕೊಪ್ಪಳದಲ್ಲಿ 2008ರಲ್ಲಿ ಸಂಬಂಧಿಕರಿಂದ 50 ಸಾವಿರ ರೂಪಾಯಿ ಕೊಟ್ಟು ಖರೀದಿಸಿದ ಜಮೀನಿನನ್ನು ಉಳುಮೆ ಮಾಡುತ್ತಿದ್ದರು ಎಂದು ಶಿವಳ್ಳಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಈ ಜಮೀನನ್ನು ಸ್ವಾಮಿ ಕುಟುಂಬ ಖರೀದಿಸಲು ಯೋಚಿಸಿತ್ತು. ಜಮೀನಿಗೆ ಹಣ ನೀಡುವ ವಿಚಾರದಲ್ಲಿ ಜಗಳವುಂಟಾಗಿ ಸಣ್ಣ ಬೆಟ್ಟಮ್ಮನನ್ನು ಕಂಬಕ್ಕೆ ಕಟ್ಟಿ ಹಾಕಿ ಸೀರೆ ಎಳೆದು ಹಲ್ಲೆ ಮಾಡಿದ್ದಲ್ಲದೆ ಕಲ್ಲಿನಿಂದ ಹೊಡೆದಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
ಸಣ್ಣ ಬೆಟ್ಟಮ್ಮ ತಾಲ್ಲೂಕು ಆಸ್ಪತ್ರೆಯಲ್ಲಿ ಹೊರ ರೋಗಿಯಾಗಿ ಚಿಕಿತ್ಸೆ ಪಡೆದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com