ಕಾರವಾರ: ಕಾರು-ಟ್ಯಾಂಕರ್ ಡಿಕ್ಕಿ, ನಾಲ್ವರು ದುರ್ಮರಣ

ಟ್ಯಾಂಕರ್ ಹಾಗೂ ಕಾರ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ನಾಲ್ವರು ದುರ್ಮರಣಕ್ಕೀಡಾಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆ ಕಾರವಾರದ ಸಮೀಪ ನಡೆದಿದೆ.
ಕಾರವಾರ: ಕಾರು-ಟ್ಯಾಂಕರ್ ಡಿಕ್ಕಿ, ನಾಲ್ವರು ದುರ್ಮರಣ
ಕಾರವಾರ: ಕಾರು-ಟ್ಯಾಂಕರ್ ಡಿಕ್ಕಿ, ನಾಲ್ವರು ದುರ್ಮರಣ
ಕಾರವಾರ: ಟ್ಯಾಂಕರ್ ಹಾಗೂ ಕಾರ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ನಾಲ್ವರು ದುರ್ಮರಣಕ್ಕೀಡಾಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆ ಕಾರವಾರದ ಸಮೀಪ ನಡೆದಿದೆ.
ಅಂಕೋಲಾ ತಾಲೂಕು ರಾಷ್ಟ್ರೀಯ  ಹೆದ್ದಾರಿ 66ರ ಹಾರವಾಡದಲ್ಲಿ ಸಂಭವಿಸಿದ ಅಪಘಾತದಲ್ಲಿ ದೊಡ್ಡಬಳ್ಳಾಪುರ ಮೂಲದ ಮೀನ, ರಮೇಶ್ ಎನ್ನುವವರು ಮೃತಪಟ್ಟಿದ್ದು ಇನ್ನಿಬ್ಬರ ಗುರುತು ಪತ್ತೆಯಾಗಿಲ್ಲ. ಪಲ್ಲವಿ ಎಂಬ ಮಹಿಳೆಗೆ ಗಂಭೀರ ಗಾಯವಾಗಿದ್ದು ಆಕೆಯನ್ನು ಕಾರವಾರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಗೋವಾದಿಂದ ಹಿಂತಿರುಗುತ್ತಿದ್ದ ಒಡಿಶಾ ನೊಂದಣಿಯಾಗಿದ್ದ ಕಾರಿನಲ್ಲಿ ಮೂವರು ಮಹಿಳೆಯರು ಹಾಗೂ ಇಬ್ಬರು ಪುರುಷರಿದ್ದರು. ಅಂಕೋಲ ಸಮೀಪದಲ್ಲಿ ಕ್ಜಾರು ಆಗಮಿಸಿದ್ದ ವೇಳೆ ಎದುರಿನಿಂಡ ಬಂದ ಟ್ಯಾಂಕರ್ ಡಿಕ್ಕಿಯಾಗಿದೆ. ಘಟನೆ ಬಳಿಕ ಟ್ಯಾಂಕರ್ ಚಾಲಕ ಪರಾರಿಯಾಗಿದ್ದಾನೆ.
ಮೃತರು ದೊಡ್ಡಬಳ್ಳಾಪುರ ಮೂಲದವರಾಗಿದ್ದು ಇವರೆಲ್ಲಾ ಮೋಜು ಮಸ್ತಿ ಮಾಡಲು ಗೋವಾಗೆ ಪ್ರವಾಸ ತೆರಳಿದ್ದರು ಎನ್ನಲಾಗಿದೆ.ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com