ಬೆಳಗಾವಿ: ಪುಲ್ವಾಮಾ ದಾಳಿಯಲ್ಲಿ 40 ಸಿಆರ್ ಪಿಎಫ್ ಯೋಧರು ಹುತಾತ್ಮರಾದರೂ ಹತಾಶರಾಗದ ಆರ್ಥಿಕವಾಗಿ ಹಿಂದುಳಿದಿರುವ ಸಾವಿರಾರು ಯುವಕರು ಇಲ್ಲಿ ನಡೆದ ಸೇನಾ ನೇಮಕಾತಿ ರ್ಯಾಲಿಯಲ್ಲಿ ಪಾಲ್ಗೊಂಡರು.
ಸೂಕ್ತ ದರದಲ್ಲಿ ಹೋಟೆಲ್, ಲಾಡ್ಜ್ ಗಳು ದೊರೆಯದ ಕಾರಣ ಶುಕ್ರವಾರ ರಾತ್ರಿ ಪುಟ್ ಬಾತ್ ಗಳ ಮೇಲೆಯೇ ಮಲಗಿ ಶನಿವಾರ ಬೆಳಗ್ಗೆ ಸೇನಾ ನೇಮಕಾತಿ ರ್ಯಾಲಿಯಲ್ಲಿ ಪಾಲ್ಗೊಂಡಿದ್ದರು.
ಗಡಿಯಲ್ಲಿ ದೇಶ ಕಾಯಲು ನಿರ್ಧರಿಸಿದ್ದು, ಒಂದು ವೇಳೆ ಸೇನೆಗೆ ನೇಮಕವಾದರೆ ಶತ್ರುಗಳ ವಿರುದ್ಧ ಹೋರಾಡುವುದಾಗಿ ಆಕಾಂಕ್ಷಿ ಅಭ್ಯರ್ಥಿಯೊಬ್ಬರು ಹೇಳಿದ್ದರು. ಭಾರತೀಯ ಸೇನೆಯ ಭಾಗವಾಗಿ ದೇಶ ಸೇವೆ ಮಾಡಲು ಸಂಬಂಧಿತ ಪ್ರಾಧಿಕಾರ ಅವಕಾಶ ನೀಡುವಂತೆ ಅವರು ಒತ್ತಾಯಿಸಿದರು.
ಕರ್ನಾಟಕ ಮಾತ್ರವಲ್ಲ, ಮಹಾರಾಷ್ಟ್ರ, ಗುಜರಾತ್, ಆಂಧ್ರಪ್ರದೇಶ, ಕೇರಳ, ತಮಿಳುನಾಡು, ಗೋವಾ, ರಾಜಸ್ತಾನದಿಂದಲೂ ಆಕಾಂಕ್ಷಿ ಅಭ್ಯರ್ಥಿಗಳು ಬಂದಿದ್ದರು.
Advertisement