ಶಿವಮೊಗ್ಗ: ಹುತಾತ್ಮ ಯೋಧರ ಸ್ಮರಣಾರ್ಥ 200ಕ್ಕೂ ಹೆಚ್ಚು ಮಂದಿಯಿಂದ ರಕ್ತದಾನ
ಪುಲ್ವಾಮಾ ಭೀಕರ ಉಗ್ರ ದಾಳಿಯಲ್ಲಿ ಹುತಾತ್ಮರಾದ ಯೋಧರ ಗೌರವಾರ್ಥಶಿವಮೊಗ್ಗದಲ್ಲಿ ಭಾನುವಾರ ರಕ್ತದಾನ ಶಿಬಿರ ಏರ್ಪಡಿಸಿದ್ದರು. ಶಿಬಿರದಲ್ಲಿ 200 ಕ್ಕಿಂತ ಹೆಚ್ಚು ಜನರು ರಕ್ತದಾನ ಮಾಡಿದರು.
ಶಿವಮೊಗ್ಗ: ಹುತಾತ್ಮ ಯೋಧರ ಸ್ಮರಣಾರ್ಥ 200ಕ್ಕೂ ಹೆಚ್ಚು ಮಂದಿಯಿಂದ ರಕ್ತದಾನ
ಶಿವಮೊಗ್ಗ: ಪುಲ್ವಾಮಾ ಭೀಕರ ಉಗ್ರ ದಾಳಿಯಲ್ಲಿ ಹುತಾತ್ಮರಾದ ಯೋಧರ ಗೌರವಾರ್ಥಶಿವಮೊಗ್ಗದಲ್ಲಿ ಭಾನುವಾರ ರಕ್ತದಾನ ಶಿಬಿರ ಏರ್ಪಡಿಸಿದ್ದರು. ಶಿಬಿರದಲ್ಲಿ 200 ಕ್ಕಿಂತ ಹೆಚ್ಚು ಜನರು ರಕ್ತದಾನ ಮಾಡಿದರು.
ಶಿವಮೊಗ್ಗ ನಗರದ ಗೋಪಾಲ ಗೌಡ ಪ್ರದೇಶದ ಸ್ಥಳೀಯರು ರಕ್ತದಾನ ಶಿಬಿರವನ್ನು ಆಯೋಜಿಸಿದರು ಮತ್ತು ಶಿವಮೊಗ್ಗ ಉಪ ಕಮೀಷನರ್ ಕೆ.ಎ. ದಯಾನಂದ ಸಹ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
"ಇದೊಂದು ಉತ್ತಮ ಕಾರ್ಯಕ್ರಮ.ನಮಗಾಗಿ ಧೈರ್ಯದಿಂಡ ದೇಶ ಕಾಯುವ ಯೋಧರ ಪ್ರಾಣತ್ಯಾಗವನ್ನು ನಾವು ಸ್ಮರಿಸಬೇಕು.ನಾವು ಈ ರಕ್ತದಾನ ಶಿಬಿರ ಮಾಡುವ ಮೂಲಕ ಅವರಿಗೆ ಗೌರವ ಸೂಚಿಸುತೇವೆ.ನಾನು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಖುಷಿಯಿಂದಿದ್ದೇನೆ; ಪ್ರತಿಯೊಬ್ಬರೂ ರಕ್ತದಾನ ಮಾಡಬೇಕು" ಎಂದು ದಯಾನಂದ ಹೇಳಿದರು.
ಜೈಶ್-ಇ-ಮೊಹಮ್ಮದ್ ಉಗ್ರ ಸಂಘಟನೆ ಪುಲ್ವಾಮಾ ಜಿಲ್ಲೆಯ ಅವಂತಿಪೋರಾ ಪ್ರದೇಶದಲ್ಲಿ ನಡೆಸಿದ್ದ ಉಗ್ರದಾಳಿಯಲ್ಲಿ ನಲವತ್ತಕ್ಕೆ ಹೆಚ್ಚು ಸಿಆರ್ ಪಿಎಫ್ ಸಿಬ್ಬಂದಿ ಹತರಾಗಿದ್ದರು. ಈ ದಾಳಿಯನ್ನು ಖಂಡಿಸಿದ ಜಾಗತಿಕ ವಲಯದ 48 ರಾಷ್ಟ್ರಗಳು ಭಾರತಕ್ಕೆ ಬೆಂಬಲ ಸೂಚಿಸಿದೆ.