ಚಿತ್ರದುರ್ಗ: ಮಲೆನಾಡು ಹಾಗೂ ಬಿಸಿಲು ನಾಡು ಚಿತ್ರದುರ್ಗದ ಜನತೆಗೆ ಇದೀಗ ಸಂಭ್ರಮಿಸುವ ಸಮಯ! ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಶಿವಮೊಗ್ಗ, ದಾವಣೆಗೆರೆ, ಚಿಕ್ಕಮಗಳೂರು ಹಾಗೂ ಚಿತ್ರದುರ್ಗಕ್ಕೆ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎ) ನಿಂದ ನೇರ ಬಸ್ ಸೇವೆ- ಫ್ಲೈ ಬಸ್ ಸೇವೆ ಕಲ್ಪಿಸಲು ಮುಂದಾಗಿದೆ. ಇದರೊಡನೆ ದಕ್ಷಿಣ ಕರ್ನಾಟಕದ ಎಲ್ಲಾ ಪ್ರಮುಖ ನಗರಗಳಿಗೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂಡ ನೇರ ಸಂಪರ್ಕ ದೊರಕಿದಂತಾಗಲಿದೆ. ಇದಾಗಲೇ ಕೆಐಎ ನಿಂದ ಕುಂದಾಪುರ, ಮಣಿಪಾಲ್, ಮಡಿಕೇರಿ, ಮೈಸೂರುಗಳಿಗೆ ಫ್ಲೈ ಬಸ್ ಸೇವೆ ಚಾಲ್ತಿಯಲ್ಲಿದೆ.