ಹೊಸ ವರ್ಷಕ್ಕೂ ಮುನ್ನ 11 ಐಪಿಎಸ್ ಅಧಿಕಾರಿಗಳ ವರ್ಗಾವಣೆ

ಹೊಸ ವರ್ಷಕ್ಕೂ ಆರಂಭಕ್ಕೂ ಮುನ್ನ ರಾಜ್ಯ ಸರ್ಕಾರ ಮೇಜರ್ ಸರ್ಜರಿ ಮಾಡಿದ್ದು, 8 ಐಎಎಸ್ ಹಾಗೂ 11 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಂಗಳೂರು: ಹೊಸ ವರ್ಷಕ್ಕೂ ಆರಂಭಕ್ಕೂ ಮುನ್ನ ರಾಜ್ಯ ಸರ್ಕಾರ ಮೇಜರ್ ಸರ್ಜರಿ ಮಾಡಿದ್ದು, 8 ಐಎಎಸ್ ಹಾಗೂ 11 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. 
ಐಪಿಎಸ್, ಐಎಎಸ್ ಅಧಿಕಾರಿಗಳ ವರ್ಗಾವಣೆಯೊಂದಿಗೆ ರಾಜ್ಯ ಸರ್ಕಾರ ಕೆಲ ಅಧಿಕಾರಿಗಳಿಗೆ ಬಡ್ತಿ ನೀಡಿದೆ. ವರ್ಗಾವಣೆಯಾದ ಅಧಿಕಾರಿಗಳ ಪಟ್ಟಿ ಇಂತಿದೆ.
ವರ್ಗಾವಣೆಯಾದ ಐಪಿಎಸ್ ಅಧಿಕಾರಿಗಳು
ಹೆಚ್.ಎಸ್. ರೇವಣ್ಣ - ಉತ್ತರ ವಲಯ ಐಜಿಪಿ
ಅಭಿಷೇಕ್ ಗೋಯಲ್  - ಜಾರಿ ನಿರ್ದೇಶನಾಲಯ ಜಂಟಿ ನಿರ್ದೇಶಕರು
ಕೌಶಲೇಂದ್ ಕುಮಾರ್- ಕೇಂದ್ರ ಗೃಹ ಇಲಾಖೆ ಜಂಟಿ ಉರ್ದೇಶಕ ನಿರ್ದೇಶಕರು
ರವಿ ಕಾಂತೇಗೌಡ - ಅಗ್ನಿ ಶಾಮಕ ಇಲಾಖೆ ಡಿಐಜಿ
ಆರ್.ದಿಲೀಪ್ - ಡಿಐಜಿ ಕೇಂದ್ರ ಕಚೇರಿ
ಸಿದ್ದರಾಮಪ್ಪ  -ಡಿಐಜಿ ಆಂತರಿಕ ಭದ್ರತಾ ವಿಭಾಗ ಬೆಂಗಳೂರು
ಲಕ್ಷ್ಮೀ ಪ್ರಸಾದ್ - ದಕ್ಷಿಣ ಕನ್ನಡ ಜಿಲ್ಲೆ ಎಸ್ಪಿ
ಬಡ್ತಿ ಪಡೆದ ಐಪಿಎಸ್ ಅಧಿಕಾರಿಗಳು
ಅಭಿಷೇಕ್ ಗೋಯಲ್, ಕೌಶಲೆಂದ್ರ ಕುಮಾರ್, ಆರ್.ದಿಲೀಪ್, ರವಿಕಾಂತೇಗೌಡ, ಚಂದ್ರಗುಪ್ತ, ತಿಯಗರಾಜನ್
ವರ್ಗಾವಣೆಯಾದ ಐಎಎಸ್ ಅಧಿಕಾರಿಗಳು
ಪೌಸಿಯಾ ತರನಮ್ - ಹಿರಿಯ ಸಹಾಯಕ ಆಯುಕ್ತರು ಕೊಳ್ಳೆಗಾಲ ವಿಭಾಗ
ಲಕ್ಷ್ಮೀಕಾಂತ್ ರೆಡ್ಡಿ - ಹಿರಿಯ ಸಹಾಯಕ ಆಯುಕ್ತರು ಸಕಲೇಶಪುರ ವಿಭಾಗ
ಡಾ.ರಾಜು ಪಿ -  ಸಿಇಒ, ಜಿಲ್ಲಾ ಪಂಚಾಯತ್ ಕಲಬುರ್ಗಿ
ಬೊಬಲನ್ ಟಿ  - ಹಿರಿಯ ಸಹಾಯಕ ಆಯುಕ್ತರು ಕುಂದಾಪುರ ವಿಭಾಗ
ನಿತೀಶ್ ಕೆ - ಹಿರಿಯ ಸಹಾಕಯ ಆಯುಕ್ತರು ಹುಣಸೂರು ವಿಭಾಗ
ಕೆ.ಲಕ್ಷ್ಮೀ ಪ್ರೀಯಾ -ಸಿಇಒ, ಜಿಲ್ಲಾ ಪಂಚಾಯತ್ ಕೊಡಗು
ಮೊಹಮ್ಮದ್ ರೋಶನ್ - ಸಿಇಒ, ಜಿಲ್ಲಾ ಪಂಚಾಯತ್ ಉತ್ತರ ಕನ್ನಡ
ಡಾ.ಸುಶೀಲಾ ಬಿ- ಹಿರಿಯ ಸಹಾಯಕ ಆಯುಕ್ತರು ಕಲಬುರ್ಗಿ ವಿಭಾಗ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com