ಬೇರೆ ಬೇರೆ ದೇವಾಲಯಗಳಲ್ಲಿ ಬೇರೆ ಬೇರೆ ರೀತಿಯ ಆಚರಣೆಗಳಿರುತ್ತದೆ.ಅಂತಹವುಗಳನ್ನು ಪ್ರಶ್ನಿಸುವುದು ಅರ್ಥವಿಲ್ಲದ ವಿಚಾರ ಎಂದ ಭೈರಪ್ಪ ಮೈಸೂರು ಚಾಂಮುಂಡಿ ದೇವಿಯು ಮಹಿಷಾಸುರನನ್ನು ಕೊಂದಳು, ಹಾಗೆ ಮಹಿಷಾಸುರನನ್ನು ಕೊಲ್ಲಲು ಪುರುಷ ದೇವತೆಗಳು ಅವಳಿಗೆ ಸಹಾಯ ಮಾಡಿದರು. ಹಾಗೆಂದು ಚಾಮುಂಡಿ ಪುರುಷರಿಗೆ ಅವಮಾನಿಸಿದ್ದಾಳೆ ಎಂದು ನ್ಯಾಯಾಲಯಕ್ಕೆ ಹೋಗಬಹುದೆ ಎಂದು ಪ್ರಶ್ನಿಸಿದ್ದಾರೆ.