ಬುಧವಾರ ಬೆಳಿಗ್ಗೆ 3.45ಕ್ಕೆ ಕೇರಳದ ಮಹಿಳೆಯರಾದ ಬಿಂದು ಹಾಗೂ ಕನಕದುರ್ಗ ಮಾದ್ಯಮ ಹಾಗೂ ವಿಐಪಿಗಳಿಗೆ ಮೀಸಲಾಗಿದ್ದ ದ್ವಾರದ ಮೂಲಕ ಶಬರಿಮಲೆ ಅಯ್ಯಪ್ಪ ದೇವಸ್ಥಾನ ಪ್ರವೇಶಿಸಿ ಅಯ್ಯಪ್ಪಸ್ವಾಮಿ ದರ್ಶನ ಪಡೆಇದ್ದರು. ಈ ಮಾಹಿತಿಯನ್ನು ಕೇರಳ ಸಿಎಂ ಪಿಣಾರಯ್ ವಿಜಯನ್,ಖಚಿತಪಡಿಸಿದ್ದು ಪೋಲೀಸ್ ಭದ್ರತೆಯಲ್ಲಿ ಇಬ್ಬರು ಮಹಿಳೆಯರು ದೇವಸ್ಥಾನದೊಳಕ್ಕೆ ಪ್ರವೇಶಿಸಿದ್ದಾರೆ ಎಂದು ತಿಳಿಸಿದ್ದರು.