ಬೆಂಗಳೂರು: ರಾಜ್ಯದ ಶಕ್ತಿ ಕೇಂದ್ರ ವಿಧಾನಸೌಧದ ವೆಸ್ಟ್ ಗೇಟ್ ನಲ್ಲಿ ಪೊಲೀಸರು ಶುಕ್ರವಾರ ಸಚಿವರ ಕಚೇರಿಯ ಸಿಬ್ಬಂದಿಯೊಬ್ಬರಿಂದ 14 ಲಕ್ಷ ರುಪಾಯಿ ನಗದು ಜಪ್ತಿ ಮಾಡಿದ್ದಾರೆ.
ಸೂಕ್ತ ದಾಖಲೆ ಇಲ್ಲದೆ ಹಣ ಸಾಗಿಸುತ್ತಿದ್ದ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಸಿ.ಪುಟ್ಟರಂಗಶೆಟ್ಟಿ ಅವರ ಕಚೇರಿ ಸಿಬ್ಬಂದಿ ಮೋಹನ್ ಅವರನ್ನು ವಿಧಾನಸೌಧ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸುತ್ತಿದ್ದಾರೆ.
ಇದು ಅಕ್ರಮ ವ್ಯವಹಾರದ ದುಡ್ಡಾಗಿದೆ ಎಂಬ ಮಾಧ್ಯಮದವರ ವಾದವನ್ನು ಮೋಹನ್ ಅವರು ತಳ್ಳಿಹಾಕಿದ್ದಾರೆ.
ಈ ಬ್ಯಾಗಲ್ಲಿ 14-15 ಲಕ್ಷ ರುಪಾಯಿ ಇದ್ದು, ಇದು ತನ್ನ ಸ್ವಂತ ಹಣ ಎಂದು ಮೋಹನ್ ಅವರು ಹೇಳಿಕೊಂಡಿದ್ದಾರೆ. ಅತ್ತ, ಇದು ಅಕ್ರಮ ಹಣ ಎಂದು ದೂರು ಕೊಟ್ಟರೆ ಮಾತ್ರ ಹಣದ ಚೀಲ ತೆರೆಯುವುದಾಗಿ ವಿಧಾನಸೌಧ ಠಾಣೆಯ ಪೊಲೀಸರು ಹೇಳಿಕೆ ನೀಡಿದ್ದಾರೆ.