ಬಂದ್ ಆಚರಿಸಿದಾಗಲೆಲ್ಲಾ ಸಾಕಷ್ಟು ಜನರು ಸಂಕಷ್ಟಕ್ಕೆ ಸಿಲುಕಿರುತ್ತಾರೆ. ಪ್ರಮುಖವಾಗಿ ರೋಗಿಗಳು. ಸಾರಿಗೆ ಸಂಪರ್ಕಗಳಿಲ್ಲದ ಕಾರಣ ಸಂಕಷ್ಟಕ್ಕೆ ಸಿಲುಕಿರುತ್ತಾರೆ. ಹೀಗಾಗಿ ಬಂದ್ ಇರುವ ದಿನ ನಾನು ನನ್ನ ಕಾರಿನಲ್ಲಿ ಮೆಜೆಸ್ಟಿಕ್ ಸುತ್ತಮುತ್ತಲಿನ ಪ್ರದೇಶದಲ್ಲಿ ಓಡಾಡುತ್ತಿರುತ್ತೇನೆ. ಮಂಗಳವಾರ ದೇಶದಾದ್ಯಂತ ಬಂದ್ ಆಚರಿಸಲಾಗುತ್ತಿತ್ತು. ಕೆಎಸ್ಆರ್'ಟಿಸಿ ಬಸ್ ನಿಲ್ದಾಣದಲ್ಲಿ ಸಣ್ಣ ಮಗುವನ್ನು ಎತ್ತಿಕೊಂಡಿದ್ದ ದಂಪತಿಗಳು ಕಣ್ಣಿಗೆ ಬ್ದಿದ್ದರು. ದಂಪತಿಗಳು ರಾಯಚೂರು ಮೂಲದವರಾಗಿದ್ದು, ಮಗುವಿಗೆ ಚಿಕಿತ್ಸೆ ಕೊಡಿಸಲು ಬೆಂಗಳೂರಿಗೆ ಬಂದಿದ್ದರು. ಆಟೋ ರಿಕ್ಷಾದವರು ದುಪ್ಪಟ್ಟು ಹಣವನ್ನು ಕೇಳಿದ್ದಾರೆ. ಇದರಿಂದ ಸಾಧ್ಯವಾಗದೆ, ನಿಲ್ದಾಣದಲ್ಲಿಯೇ ನಿಂತಿದ್ದರು. ಬಳಿಕ ಅವರನ್ನು ಆಸ್ಪತ್ರೆಗೆ ಕರೆದೊಯ್ಡು ಸಹಾಯ ಮಾಡಿದೆ. ಬಳಿಕ ಅಲ್ಲಿಂದ ನಾಲ್ವರನ್ನು ಯಲಹಂಕಕ್ಕೆ ಡ್ರಾಪ್ ಮಾಡಿದ್ದೆ ಎಂದು ಸಭಾಪತಿಯವರು ಹೇಳಿದ್ದಾರೆ.