ತುಮಕೂರು: ಅವರಸದಲ್ಲಿ ಬಿಟ್ಟು ಹೋಗಿದ್ದ ಲಕ್ಷಾಂತರ ರು. ಮೌಲ್ಯದ ಚಿನ್ನಾಭರಣವನ್ನು ಮಾಲೀಕರಿಗೆ ವಾಪಸ್ ನೀಡಿ ಕೆಎಸ್ ಆರ್ ಟಿಸಿ ಬಸ್ ಕಂಡಕ್ಟರ್ ಪ್ರಾಮಾಣಿಕತೆ ಮೆರೆದಿರುವ ಘಟನೆ ತುಮಕೂರಿನ ಸಿರಾ ಡಿಪೋದಲ್ಲಿ ನಡೆದಿದೆ.,
ಪಾವಗಡದ ನಾಗಲತಾ ಮಂಗಳವಾರ ತಮ್ಮ ಮಗಳ ಸೀಮಂತ ಕಾರ್ಯಕ್ರಮಕ್ಕೆ ಬೆಂಗಳೂರಿಗೆ ತೆರಳುತ್ತಿದ್ದರು, ಈ ವೇಳೆ ಇಳಿಯುವಾಗ ಮರೆತು ಸೀಟಿನಲ್ಲಿ ಸುಮಾರು ಆರೂವರೆ ಲಕ್ಷ ರು. ಮೌಲ್ಯದ ಚಿನ್ನಾಭರಣವನ್ನು ಬಿಟ್ಟು ಹೋಗಿದ್ದರು.
ಕಂಡಕ್ಟರ್ ಗೆ ಬ್ಯಾಗ್ ಸಿಕ್ಕಿದೆ ಅದನ್ನು ಸಿರಾ ಡಿಪೋ ಮ್ಯಾನೇಜರ್ ಗೆ ನೀಡಿದ್ದಾರೆ. ಅದಾದ ನಂತರ ಮಹಿಳೆ ತಾವು ಕಳೆದುಕೊಂಡ ಬ್ಯಾಗ್ ಸಂಬಂಧ ಪೊಲೀಸರಿಗೆ ದೂರು ನೀಡಿದ್ದರು. ವಿಚಾರಣೆ ನಡೆಸಿದ ಪೊಲೀಸರು ಮಹಿಳೆಗೆ ತಮ್ಮ ಚಿನ್ನಾರಭರಣ ವಾಪಸ್ ನೀಡಿದ್ದಾರೆ,.