ಗದಗ: ಭಕ್ತನಿಗಾಗಿ ದರ್ಗಾದಲ್ಲಿ ಪೂಜೆ ಮಾಡಿದ ಮುಸ್ಲಿಮರು

ಮಾಲೆ ಧರಿಸಿದ್ದ ಅಯ್ಯಪ್ಪ ಭಕ್ತನಿಗೆ ಹಣ ಸಹಾಯ ಮಾಡುವ ಸಲುವಾಗಿ ದರ್ಗಾದಲ್ಲಿ ವಿಶೇಷ ಪೂಜೆ ಮಾಡಿರುವ ಘಟನೆ ಗದಗದಲ್ಲಿ ನಡೆದಿದೆ....
ಗದಗದ ದರ್ಗಾದಲ್ಲಿ ಅಯ್ಯಪ್ಪ ಸ್ವಾಮಿ ಪೂಜೆ
ಗದಗದ ದರ್ಗಾದಲ್ಲಿ ಅಯ್ಯಪ್ಪ ಸ್ವಾಮಿ ಪೂಜೆ
ಗದಗ: ಮಾಲೆ ಧರಿಸಿದ್ದ ಅಯ್ಯಪ್ಪ ಭಕ್ತನಿಗೆ ಹಣ ಸಹಾಯ ಮಾಡುವ ಸಲುವಾಗಿ ದರ್ಗಾದಲ್ಲಿ ವಿಶೇಷ ಪೂಜೆ ಮಾಡಿರುವ ಘಟನೆ ಗದಗದಲ್ಲಿ ನಡೆದಿದೆ.
ಗದಗದ ಖಾಂತೋಟ ದರ್ಗಾದಲ್ಲಿ ಮಂಗಳವಾರ ಸಂಜೆ ಅಯ್ಯಪ್ಪಸ್ವಾಮಿಗೆ ಅಭಿಷೇಕ ಪೂಜೆ ಮಾಡಿ ಭಕ್ತಿ ಗೀತೆ ಹಾಡಿ. ಮುಸಲ್ಮಾನರಿಂದ ಹಣ ಸಂಗ್ರಹಿಸಿ, ಕೊರತೆಯಿದ್ದ ಹಣವನ್ನು ನೀಡಿದ್ದಾರೆ.
ಖಾಂತೋಟದ ಅಬ್ದುಲ್ ಮುನಾಫ್ ಮುಲ್ಲಾ  ಈ ನಿರ್ಧಾರ ಕೈಗೊಂಡಿದ್ದಾರೆ, ಅಯ್ಯಪ್ಪ ಭಕ್ತರಿಗೆ ಶಬರಿಮಲೆಗೆ ತೆರಳಲು ಹಣದ ಕೊರತೆ ಇರುವುದನ್ನು ಮನಗಂಡ ಮುನಾಫ್, ತಮ್ಮ ಸಮುದಾಯದ ಸದಸ್ಯರಿಂದ ಹಣ ಸಂಗ್ರಹಿಸಿ 5 ಸಾವಿರ ರು ಹಣವನ್ನು ಅಯ್ಯಪ್ಪ ಭಕ್ತಾದಿಗಳಿಗೆ ನೀಡಿದ್ದಾರೆ.
ದರ್ಗಾದಲ್ಲಿ ಸುಮಾರು 25 ಕ್ಕೂ ಹೆಚ್ಚು ಭಕ್ತರು ಅಯ್ಯಪ್ಪ ಸ್ವಾಮಿಗೆ ಪೂಜೆ ನಡೆಸಿ, ಇತರರಿಗೆ ಮಾದರಿಯಾಗಿದ್ದಾರೆ ಎಂದುಪ ಟಿ.ಎನ್ ಗುರುಸ್ವಾಮಿ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com