ನಗದು ವಶ ಕೇಸಿನ ವರದಿ ಮಾಡದಂತೆ ಮಾಧ್ಯಮಗಳಿಗೆ ತಡೆ ಹಾಕಿ: ಸಚಿವ ಪುಟ್ಟರಂಗ ಶೆಟ್ಟಿ ಕೋರ್ಟ್ ಮೊರೆ

ತಮ್ಮ ಸಹಾಯಕನ ಬಳಿ ಸಿಕ್ಕಿದ ದಾಖಲೆಗಳಿಲ್ಲದೆ ಹಣದ ಬಗ್ಗೆ ಮಾಧ್ಯಮಗಳು ವರದಿ ಮಾಡುವುದಕ್ಕೆ ....
ಟೈಪಿಸ್ಟ್ ಮೋಹನ್
ಟೈಪಿಸ್ಟ್ ಮೋಹನ್

ಬೆಂಗಳೂರು: ತಮ್ಮ ಸಹಾಯಕನ ಬಳಿ ಸಿಕ್ಕಿದ ದಾಖಲೆಗಳಿಲ್ಲದೆ ಹಣದ ಬಗ್ಗೆ ಮಾಧ್ಯಮಗಳು ವರದಿ ಮಾಡುವುದಕ್ಕೆ ತಡೆ ನೀಡಬೇಕೆಂದು ಕೋರಿ ಹಿಂದುಳಿದ ಕಲ್ಯಾಣ ಇಲಾಖೆ ಸಚಿವ ಸಿ ಪುಟ್ಟರಂಗ ಶೆಟ್ಟಿ ಹೈಕೋರ್ಟ್ ಮೊರೆ ಹೋಗಿದ್ದಾರೆ.

ಜನವರಿ 4ರಂದು ಟೈಪಿಸ್ಟ್ ಮೋಹನ್ ಬಳಿಯಿಂದ ವಿಧಾನಸೌಧ ಆವರಣದಲ್ಲಿ ಪೊಲೀಸರು 25 ಲಕ್ಷದ 76 ಸಾವಿರ ರೂಪಾಯಿ ವಶಪಡಿಸಿಕೊಂಡಿದ್ದರು.

ಸಚಿವರು ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ನ್ಯಾಯಾಲಯ ಬರುವ ಸೋಮವಾರಕ್ಕೆ ಮುಂದೂಡಿದೆ. ಮಾಧ್ಯಮಗಳು ನಗದು ಪತ್ತೆ ವಿಷಯಕ್ಕೆ ಸಂಬಂಧಪಟ್ಟಂತೆ ಸಿಟಿ ಸಿವಿಲ್ ಕೋರ್ಟಿನಲ್ಲಿ ಪುಟ್ಟರಂಗ ಶೆಟ್ಟಿ ಮೊರೆ ಹೋಗಿದ್ದರು. ಆದರೆ ಸಿಟಿ ಸಿವಿಲ್ ನ್ಯಾಯಾಲಯ ಮಾಧ್ಯಮಗಳಿಗೆ ನೊಟೀಸ್ ಮಾತ್ರ ಜಾರಿ ಮಾಡಿತ್ತು. ಹೀಗಾಗಿ ಸಚಿವರು ಹೈಕೋರ್ಟ್ ಮೊರೆ ಹೋಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com