ಆರೋಗ್ಯದಲ್ಲಿ ಅಲ್ಪ ಚೇತರಿಕೆ, ಒಂದೂವರೆ ಗಂಟೆ ಕಾಲ ಸ್ವಯಂ ಉಸಿರಾಡಿದ ಶ್ರೀಗಳು

ಅನಾರೋಗ್ಯಕ್ಕೆ ತುತ್ತಾಗಿರುವ ಶತಾಯುಷಿ ಸಿದ್ದಗಂಗಾ ಶ್ರೀಗಳ ಆರೋಗ್ಯದಲ್ಲಿ ಅಲ್ಪ ಚೇತರಿಕೆ ಕಂಡುಬಂದಿದ್ದು, ಶ್ರೀಗಳು ಇಂದು ಸುಮಾರು ಒಂದೂವರೆ ಗಂಟೆಗಳ ಕಾಲ ಸ್ವಯಂ ಉಸಿರಾಟ ನಡೆಸಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಶ್ರೀಗಳಿಗೆ ಮುಂದುವರೆದ ಚಿಕಿತ್ಸೆ
ಶ್ರೀಗಳಿಗೆ ಮುಂದುವರೆದ ಚಿಕಿತ್ಸೆ
ತುಮಕೂರು: ಅನಾರೋಗ್ಯಕ್ಕೆ ತುತ್ತಾಗಿರುವ ಶತಾಯುಷಿ ಸಿದ್ದಗಂಗಾ ಶ್ರೀಗಳ ಆರೋಗ್ಯದಲ್ಲಿ ಅಲ್ಪ ಚೇತರಿಕೆ ಕಂಡುಬಂದಿದ್ದು, ಶ್ರೀಗಳು ಇಂದು ಸುಮಾರು ಒಂದೂವರೆ ಗಂಟೆಗಳ ಕಾಲ ಸ್ವಯಂ ಉಸಿರಾಟ ನಡೆಸಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. 
ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ಶ್ರೀಗಳ ಆಪ್ತ ವೈದ್ಯ ಡಾ.ಪರಮೇಶ್ ಅವರು, ಶ್ರೀಗಳ ಆರೋಗ್ಯದಲ್ಲಿ ಸ್ವಲ್ಪ ಮಟ್ಟಿನ ಚೇತರಿಕೆ ಕಂಡು ಬಂದಿದೆ. ಉಸಿರಾಟದ ವೆಂಟಿಲೇಶನ್ ಅಳವಡಿಸಲಾಗಿತ್ತು. ಆದರೆ ಶ್ರೀಗಳೇ ಇಂದು ಸುಮಾರು ಒಂದೂವರೆ ಗಂಟೆಗಳಾ ಕೃತಕ ಉಸಿರಾಟದ ವ್ಯವಸ್ಥೆ ಇಲ್ಲದೇ ಉಸಿರಾಟ ಮಾಡಿದರು. ಸ್ವಯಂ ಉಸಿರಾಟ ಒಳ್ಳೆಯ ಸೂಚನೆ. ಚಿಕಿತ್ಸೆ ಹಾಗೂ ನ್ಯೂಟ್ರಿಷಿಯನ್ ಮುಂದುವರಿಯುತ್ತಿದೆ. ವಿಶೇಷ ವೈದ್ಯರ ತಂಡದಿಂದ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹೇಳಿದರು.
ಸ್ವಾಮೀಜಿ ಅವರ ಅಚ್ಚುಮೆಚ್ಚಿನ ಶಿಷ್ಯ ನಾಗಣ್ಣ ಅವರಿಂದಲೂ ವೈದ್ಯರು ಮಾತುಕತೆ ನಡೆಸಿದರು.  ಶ್ರೀಗಳಿಗೆ ಚಿಕಿತ್ಸೆ ನೀಡಲು ಅಮೆರಿಕಾದಲ್ಲಿದ್ದ ಡಾ.ನಾಗಣ್ಣ ಬಂದಿದ್ದಾರೆ. ಶ್ರೀಗಳ ಆರೋಗ್ಯದಲ್ಲಿ ಸ್ವಲ್ಪಮಟ್ಟಿನ ಚೇತರಿಕೆ ಕಂಡಿದೆ ಎಂದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com