ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ಶ್ರೀಗಳ ಆಪ್ತ ವೈದ್ಯ ಡಾ.ಪರಮೇಶ್ ಅವರು, ಶ್ರೀಗಳ ಆರೋಗ್ಯದಲ್ಲಿ ಸ್ವಲ್ಪ ಮಟ್ಟಿನ ಚೇತರಿಕೆ ಕಂಡು ಬಂದಿದೆ. ಉಸಿರಾಟದ ವೆಂಟಿಲೇಶನ್ ಅಳವಡಿಸಲಾಗಿತ್ತು. ಆದರೆ ಶ್ರೀಗಳೇ ಇಂದು ಸುಮಾರು ಒಂದೂವರೆ ಗಂಟೆಗಳಾ ಕೃತಕ ಉಸಿರಾಟದ ವ್ಯವಸ್ಥೆ ಇಲ್ಲದೇ ಉಸಿರಾಟ ಮಾಡಿದರು. ಸ್ವಯಂ ಉಸಿರಾಟ ಒಳ್ಳೆಯ ಸೂಚನೆ. ಚಿಕಿತ್ಸೆ ಹಾಗೂ ನ್ಯೂಟ್ರಿಷಿಯನ್ ಮುಂದುವರಿಯುತ್ತಿದೆ. ವಿಶೇಷ ವೈದ್ಯರ ತಂಡದಿಂದ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹೇಳಿದರು.