ಕಲಬುರ್ಗಿ ನಗರದ ಕೇಂದ್ರ ಬಸ್ ನಿಲ್ದಾಣದ ಬಳಿ ಇರುವ ಸಂತೋಷ್ ಲಾಡ್ಜ್ ಮ್ಯಾನೇಜರ್ ಮಲ್ಲಿಕಾರ್ಜುನ ಅವರ ಹತ್ಯೆಯಾಗಿತ್ತು. ಆರೋಪಿ ತಾನು ಲಾಡ್ಜ್ ಮ್ಯಾನೇಜರ್ ಆಗಬೇಕೆಂದಿದ್ದು ಆ ಸ್ಥಾನಕ್ಕೆ ಮಲ್ಲಿಕಾರ್ಜುನ ನೇಮಕವಾಗಿದ್ದ ಹಿನ್ನೆಲೆಯಲ್ಲಿ ಈ ಹತ್ಯೆ ನಡೆಸಿದ್ದ. ಆರೋಪಿಯನ್ನು ಬಂದಿಸಲು ಪೋಲೀಸರು ತೆರಳಿದ್ದಾಗ ಅವರ ಮೇಲೆ ಮಾರಕಾಸ್ತ್ರಗಳಿಂದ ದಾಳಿ ಮಾಡಲು ಪ್ರಯತ್ನಿಸಿದ ಸಂತೋಷ್ ಮೇಲೆ ಪೋಲೀಸರು ಫೈರಿಂಗ್ ಮಾಡಿದ್ದಾರೆ.ಆರ್ಜೆ ನಗರ ಠಾಣೆ ಪಿಎಸ್ಐ ಮಹಾಂತೇಶ್ಈ ಫೈರಿಂಗ್ ನಡೆಸಿದ್ದಾರೆ.