ವಿಜಯಪುರ-ಹೈದರಾಬಾದ್ ಮಾರ್ಗದ ಬಸ್ ನಿರ್ವಾಹಕನಾಗಿರುವ ಶ್ರೀಧರ್ ವಿನಾಯಕ ಪವಾರ್ ಎಂಬುವವರೇ ಈ ಪ್ರಾಮಾಣಿಕ ಬಸ್ ನಿರ್ವಾಹಕ. ಬಸ್ ಸ್ವಚ್ಚಗೊಳಿಸುವಾಗ ಬಸ್ ನಲ್ಲಿ ಸುಮಾರು 60,000 ರು. ಬೆಲೆ ಬಾಳುವ ಚಿನ್ನದ ಸರವೊಂದು ಕಂಡಿದೆ. ತಕ್ಷಣ ಎಚ್ಚೆತ್ತ ನಿರ್ವಾಹಕ ಶ್ರೀಧರ್ ತನ್ನ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿ ಸರದ ಮಾಲೀಕರನ್ನು ಹುಡುಕಿಸಿ ಸರವನ್ನು ಹಿಂತಿರುಗಿಸಿದ್ದಾರೆ.