ದೇವಾಲಯದ ಭಕ್ತರಿಗೆಲ್ಲರಿಗೂ ಪ್ರಸಾದ ಹಂಚುವ ವೇಳೆ ಗೌರಿಗೆ ಮಾತ್ರ ವಿಷ ಪ್ರಸಾದ ನೀಡಲು ಆರೋಪಿಗಳು ಯೋಜನೆ ರೂಪಿಸಿದ್ದರು. ಇತರ ಜನರನ್ನು ಹೊರತುಪಡಿಸಿ ಗೌರಿ ಒಬ್ಬಳಿಗೆ ಸಮಸ್ಯೆಯಾದರೆ, ಯಾರಿಗೂ ಅನುಮಾನ ಬರುವುದಿಲ್ಲ ಎಂದು ಆರೋಪಿಗಳು ಆಲೋಚಿಸಿದ್ದರು. ಆದರೆ, ಅಮರಾವತಿ ದೇಗುಲದಲ್ಲಿ ವಿಷ ಪ್ರಸಾದವನ್ನು ಗೊಂದಲದಲ್ಲಿ ಕೆಲ ಲೋಟಗಳಿಗೂ ಹಾಕಿದ್ದಾಳೆ. ಇದರಿಂದ ಇತರರು ವಿಷ ಸೇವಿಸುವಂತಾಗಿತ್ತು ಎಂದು ಹೇಳಲಾಗುತ್ತಿದೆ.