ಬೆಳಗಾವಿಯ ಕಲಾಭವನದಲ್ಲಿ ನಡೆದ ಕನ್ನಡ ಭಾಷಾ ಮಾಧ್ಯಮ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು , ನಾನು ಯಾವುದೇ ಭಾಷೆಯ ವಿರೋಧಿ ಅಲ್ಲ.ಈ ನೆಲದ ಭಾಷೆ ಕನ್ನಡವನ್ನು ಅನಾದರದಿಂದ ಕಾಣಬಾರದು. ಕೆಲವರಿಗೆ ಅಪ್ಪ, ಅಮ್ಮ ಅಂದರೆ ಖುಷಿ ಆಗುವುದಿಲ್ಲ. ಮಮ್ಮಿ, ಡ್ಯಾಡಿ ಅಂದರೆ ಖುಷಿಯಾಗುತ್ತದೆ. ಇದು ಅವಿದ್ಯಾವಂತರು ಮಾಡುವುದಿಲ್ಲ. ನಾನು ನನ್ನ ಮಕ್ಕಳಿಗೆ ಅಪ್ಪ, ಅಮ್ಮ ಎಂದು ಕರೆಯಲು ಹೇಳಿಕೊಟ್ಟಿದ್ದೇನೆ ಎಂದು ಹೇಳುವ ಮೂಲಕ ಭಾಷಾಭಿಮಾನ ಮೆರೆದರು.