ಬ್ಯಾಂಕ್ ಅಧಿಕಾರಿಗಳು ಆಕೆಗೆ ಹೊಸ ಕಾರ್ಡ್ ನೀಡಿದರಾದರೂ ನಿರ್ಬಂಧಿಸಲಾಗಿರುವ ಕಾರ್ಡ್ ಆಕೆಗೆ ಸೇರಿದ್ದಾಗಿರದೆ ಆ ವಂಚಕ ವ್ಯಕ್ತಿಯದ್ದಾಗಿತ್ತು. ಹಾಗೆಯೇ ಆಕೆಯ ಕಾರ್ಡ್ ಆ ವ್ಯಕ್ತಿಯ ಬಳಿಯೇ ಇತ್ತು. ಜೂನ್ 17 ರಂದು, ಅವರು ಭದ್ರಾವತಿಯಲ್ಲಿದ್ದ ವೇಳೆ ಜೂನ್ 16 ರಂದು ಇನ್ನೂ ರೂ. 40,000 ರು. ಡ್ರಾ ಆಗಿರುವ ಸಂದೇಶ ರಾಧಾ ಅವರ ಮೊಬೈಲ್ ಗೆ ಬಂದಿದೆ.ಭಯಭೀತರಾದ ಆಕೆ ತನ್ನ ಖಾತೆಯನ್ನು ಹೊಂದಿರುವ ಸ್ಥಳೀಯ ಬ್ಯಾಂಕ್ ಗೆ ತೆರಳಿದ್ದಾಗ ಅಲ್ಲಿ ಆಕೆಯ ಬಳಿ ಇರುವ ಕಾರ್ಡ್ ಅವರಿಗೆ ಸೇರಿದ್ದಲ್ಲ ಎಂದು ಮಾಹಿತಿ ದೊರಕಿದೆ. ನಂತರ ಅವರು ಕಾರ್ಡ್ ಅನ್ನು ನಿರ್ಬಂಧಿಸಿದರು ಆದರೆ ದುಷ್ಕರ್ಮಿ ಕಳೆದ ಮೂರು ದಿನಗಳಲ್ಲಿ ಆಕೆಯ ಖಾತೆಯಿಂದ 1.2 ಲಕ್ಷ ರೂ ಡ್ರಾ ಮಾಡಿಕೊಂಡಿದ್ದ.