ಮಂಗಳೂರು: ಪೋಲೀಸರ ಮೇಲೆ ಹಲ್ಲೆಗೆ ಯತ್ನಿಸಿದ ರೌಡಿಶೀಟರ್ ಗೆ ಪೋಲೀಸ್ ಗುಂಡೇಟು

ಅಕ್ರಮ ಗೋಸಾಗಾಟ ನಡೆಸಿದರೆಂದು ಶಂಕೆಯ ಮೇಲೆ ತಲ್ವಾರು ದಾಳಿ ನಡೆಸಿದ್ದ ರೌಡಿ ಶೀಟರ್ ಬಂಧನಕ್ಕೆ ತೆರಳಿದ್ದ ವೇಳೆ ಸ್ವರಕ್ಷಣೆಗಾಗಿ ಫೈರಿಂಗ್....
ಮಂಗಳೂರು: ಪೋಲೀಸರ ಮೇಲೆ ಹಲ್ಲೆಗೆ ಯತ್ನಿಸಿದ ರೌಡಿಶೀಟರ್ ಗೆ ಪೋಲೀಸ್ ಗುಂಡೇಟು
ಮಂಗಳೂರು: ಪೋಲೀಸರ ಮೇಲೆ ಹಲ್ಲೆಗೆ ಯತ್ನಿಸಿದ ರೌಡಿಶೀಟರ್ ಗೆ ಪೋಲೀಸ್ ಗುಂಡೇಟು
ಮಂಗಳೂರು: ಅಕ್ರಮ ಗೋಸಾಗಾಟ ನಡೆಸಿದರೆಂದು ಶಂಕೆಯ ಮೇಲೆ  ತಲ್ವಾರು ದಾಳಿ ನಡೆಸಿದ್ದ ರೌಡಿ ಶೀಟರ್ ಬಂಧನಕ್ಕೆ ತೆರಳಿದ್ದ ವೇಳೆ ಸ್ವರಕ್ಷಣೆಗಾಗಿ ಫೈರಿಂಗ್ ನಡೆಸಿದ ಘಟನೆ ಮಂಗಳೂರು ಸಮೀಪದ ಅಡ್ಯಾರುವಿನಲ್ಲಿ ನಡೆದಿದೆ.
ಮಂಗಳವಾರ ಬೆಳಗಿನ ಸಮಯದಲ್ಲಿ ರೌಡಿ ಶೀಟರ್ ಭವಿತ್ ರಾಜ ಎನ್ನುವವನನ್ನು ಬಂಧಿಸಲು ತೆರಳಿದ್ದ ಪೋಲೀಸರ ಮೇಲೆ ಆತ ಹಲ್ಲೆಗೆ ಮುಂದಾಗಿದ್ದಾನೆ. ಆ ವೇಳೆ ಸ್ವರಕ್ಷಣೆಗಾಗಿ ಕಂಕನಾಡಿ ಠಾಣಾಧಿಕಾರಿಗಳು ಆತನ ಮೇಲೆ ಗುಂಡು ಹಾರಿಸಿದ್ದಾರೆ.
ರೌಡಿ ಶೀಟರ್ ಭವಿತ್ ರಾಜ್ ಮೇಲೆ ಕಂಕನಾಡಿ ಪೋಲೀಸ್ ಠಾಣೆಯಲ್ಲಿ ಎಂಟು ಪ್ರಕರಣಗಳು ದಾಖಲಾಗಿದೆ. 
ಮಂಗಳೂರು ಕುಲಶೇಖರ ಸಿಲ್ವರ್ ಗೇಟ್ ಬಳಿ ಅಕ್ರಮ ಗೋಸಾಗಾಟ ನಡೆದಿದೆ  ಎಂಬ ಶಂಕೆಯ ಮೇರೆಗೆ ವಾಹನವನ್ನು ಅಡ್ಡಗಟ್ಟಿ ಮೂವರ ಮೇಲೆ ತಲ್ವಾರ್ ನಿಂದ ಹಲ್ಲೆ ನಡೆಸಿದ್ದ ಪ್ರಕರಣದಲ್ಲಿ ಭವಿತ್ ಭಾಗವಹಿಸಿದ್ದನೆಂದು ಪೋಲೀಸರಿಗೆ ಮಾಹಿತಿ ಲಭಿಸಿದೆ. ಈ ಸಂಬಂಧ ಭವಿತ್ ಬಂಧನಕ್ಕೆ ಅವರು ಬಲೆ ಬೀಸಿದ್ದರು.
ಇಂದಿನ ಫೈರಿಂಗ್ ಘತಾನೆ ಕುರಿತಂತೆ ಮಂಗಳೂರು ನಗರ ಪೋಲೀಸ್ ಆಯುಕ್ತ ಸಂದೀಪ್ ಪಾಟೀಲ್ ಮಾದ್ಯಮಗಳಿಗೆ ಮಾಹಿತಿ ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com