ಕಡ್ಡಾಯ ಗ್ರಾಮೀಣ ಸೇವೆಗೆ ಸಂಬಂಧಿಸಿದಂತೆ ಈವರೆಗೆ ಮುಚ್ಚಳಿಕೆ ಬರೆದುಕೊಟ್ಟು ಅದನ್ನು ಉಲ್ಲಂಘಿಸಿರುವ ವೈದ್ಯರ ವಿರುದ್ಧ ದಂಡ ವಸೂಲು ಮಾಡಲು ನ್ಯಾಯಾಲಯದಲ್ಲಿ ದಾವೆ ಹೂಡಲು ಸರ್ಕಾರ ನಿರ್ಧರಿಸಿದೆ. ದಂಡದ ಮೊತ್ತದ ಶೇ 10 ರಷ್ಟನ್ನು ನ್ಯಾಯಾಲದ ಶುಲ್ಕವಾಗಿ ಕಟ್ಟಬೇಕಾಗಿದ್ದು ಇದು ಅಂದಾಜು ಎಂಟರಿಂದ ಹತ್ತು ಕೋಟಿ ರೂಪಾಯಿ ಆಗಬಹುದು ಎಂದು ಸಚಿವರು ಹೇಳಿದರು.