ಇದು ಖ್ಯಾತ ನಟಿ ಸುಹಾಸಿನಿ ಮಣಿರತ್ನಮ್ ಅವರು ಚೆನ್ನೈ ನೀರಿನ ಬವಣೆಯನ್ನು ಬಿಚ್ಚಿಟ್ಟ ಪರಿ. 'ಕಾವೇರಿ ಕೂಗು' ಅಭಿಯಾನ ಕುರಿತ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂರು ವರ್ಷಗಳ ಹಿಂದೆ ಚೆನ್ನೈನಲ್ಲಿ ನೆರೆ ಪರಿಸ್ಥಿತಿ ಉಂಟಾದಾಗ ಯಾರಿಗೂ ನೀರಿನ ಮಹತ್ವ ಅರಿವಾಗಿರಲಿಲ್ಲ. ಆದರೆ, ಸದ್ಗುರು ಆಗಲೇ ನದಿಗಳನ್ನು ಉಳಿಸುವ ಅಭಿಯಾನ ಆರಂಭಿಸಿದ್ದರು. ಈಗ ಅದರ ಮಹತ್ವ ಅರಿವಾಗುತ್ತಿದೆ ಎಂದರು.