ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನೆಲಮಂಗಲ: 12 ವರ್ಷಗಳ ನೋವು, ಮಕ್ಕಳು ಆಗುತ್ತೆ ಎಂದು ನಂಬಿ ಮಾತ್ರೆ ನುಂಗಿ ಪತಿ ಸಾವು, ಪತ್ನಿ ಅಸ್ವಸ್ಥ!

12 ವರ್ಷಗಳಿಂದ ಮಕ್ಕಳಾಗಿಲ್ಲ ಎಂಬ ಕೊರಗು. ಆ ದೇವರು ಇನ್ನಾದರೂ ನಮ್ಮ ಕೈಹಿಡಿಯಲಿ ಎಂದು ಆಸೆಯಿಂದ ಮಕ್ಕಳಾಗುತ್ತೆ ಅಂತಾ ಜಾಹಿರಾತೊಂದನ್ನು ನೋಡಿ ಮಾತ್ರೆ ನುಂಗಿದ...
ನೆಲಮಂಗಲ: 12 ವರ್ಷಗಳಿಂದ ಮಕ್ಕಳಾಗಿಲ್ಲ ಎಂಬ ಕೊರಗು. ಆ ದೇವರು ಇನ್ನಾದರೂ ನಮ್ಮ ಕೈಹಿಡಿಯಲಿ ಎಂದು ಆಸೆಯಿಂದ ಮಕ್ಕಳಾಗುತ್ತೆ ಅಂತಾ ಜಾಹಿರಾತೊಂದನ್ನು ನೋಡಿ ಮಾತ್ರೆ ನುಂಗಿದ ದಂಪತಿ ಪೈಕಿ ಪತಿ ಮೃತಪಟ್ಟಿದ್ದು ಪತ್ನಿ ತೀವ್ರವಾಗಿ ಅಸ್ವಸ್ಥರಾಗಿ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. 
ನೆಲಮಂಗಲದ ಅರಿಶಿನಕುಂಟೆ ಗ್ರಾಮದ 42 ವರ್ಷದ ಶಶಿಧರ್ ಮೃತ ದುರ್ದೈವಿ. 37 ವರ್ಷದ ಗಂಗಮ್ಮ ತೀವ್ರ ಅಸ್ವಸ್ಥರಾಗಿದ್ದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 
ಬಿಹಾರಿ ಮೂಲದ ಕಾರಿನಲ್ಲಿ ಜಾಹಿರಾತು ಹಾಕಿಕೊಂಡು ಬಂದವರು ಈ ಮಾತ್ರೆ ನುಂಗಿ ನಿಮಗೆ ಗರ್ಭಧಾರಣೆ ಆಗುತ್ತದೆ ಎಂದು ನಂಬಿಸಿದ್ದಾರೆ. ಮೊದಲೆ ನೊಂದಿದ್ದ ದಂಪತಿ ಆಗಲಿ ಎಂದು 25 ಸಾವಿರ ರುಪಾಯಿಗೆ ಒಪ್ಪಿಕೊಂಡು ಮುಂಗಡವಾಗಿ ಎರಡು ಸಾವಿರ ರುಪಾಯಿ ಹಣ ನೀಡಿ ಅಲ್ಲೇ ಮಾತ್ರೆಯನ್ನು ಸೇವಿಸಿದ್ದಾರೆ.
ಮಾತ್ರೆ ನುಂಗಿದ 10 ನಿಮಿಷದಲ್ಲೇ ದಂಪತಿಗೆ ಭೇದಿ ಶುರುವಾಗಿ ನಿತ್ರಾಣಗೊಂಡಿದ್ದು ತೀವ್ರ ಅನಾರೋಗ್ಯಕ್ಕೊಳಗಾಗಿದ್ದಾರೆ. ಈ ವೇಳೆ ಪತಿ ಮೃತಪಟ್ಟಿದ್ದು ಪತ್ನಿ ಅಸ್ವಸ್ಥರಾಗಿದ್ದಾರೆ. ಈ ಸಂಬಂಧ ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com