ಐಎಂಎ ವಂಚನೆ ಪ್ರಕರಣ: ರಾಜಕಾರಣಿಗಳ ಹೆಸರು ಬಾಯಿಬಿಟ್ಟ ಮನ್ಸೂರ್

ಐಎಂಎ ಜ್ಯುವೆಲರ್ಸ್ ಬಹುಕೋಟಿ ವಂಚನೆಯ ಪ್ರಮುಖ ಆರೋಪಿ ಮನ್ಸೂರ್ ಖಾನ್ ನನ್ನು ಜಾರಿ ನಿರ್ದೇಶನಾಲಯ ಅಧಿಕಾರಿಗಳು ಒಂದು ವಾರದಿಂದ ತೀವ್ರ ವಿಚಾರಣೆ ನಡೆಸುತ್ತಿದ್ದು, ಅಧಿಕಾರಿಗಳ ಎದುರು ಕೆಲವು ಕುತೂಹಲಕಾರಿ ಮಾಹಿತಿಯನ್ನು ಬಾಯಿ ಬಿಟ್ಟಿದ್ದಾನೆ ಎನ್ನಲಾಗುತ್ತಿದೆ.
ಮನ್ಸೂರ್ ಖಾನ್
ಮನ್ಸೂರ್ ಖಾನ್
ಬೆಂಗಳೂರು: ಐಎಂಎ ಜ್ಯುವೆಲರ್ಸ್ ಬಹುಕೋಟಿ ವಂಚನೆಯ ಪ್ರಮುಖ ಆರೋಪಿ ಮನ್ಸೂರ್ ಖಾನ್ ನನ್ನು ಜಾರಿ ನಿರ್ದೇಶನಾಲಯ ಅಧಿಕಾರಿಗಳು ಒಂದು ವಾರದಿಂದ ತೀವ್ರ ವಿಚಾರಣೆ ನಡೆಸುತ್ತಿದ್ದು, ಅಧಿಕಾರಿಗಳ ಎದುರು ಕೆಲವು ಕುತೂಹಲಕಾರಿ ಮಾಹಿತಿಯನ್ನು ಬಾಯಿ ಬಿಟ್ಟಿದ್ದಾನೆ ಎನ್ನಲಾಗುತ್ತಿದೆ.
 ಜಾರಿ ನಿರ್ದೇಶನಾಲಯ ಅಧಿಕಾರಿಗಳ ಪ್ರಶ್ನೆಗಳಿಗೆ ಮನ್ಸೂರ್ ಖಾನ್ ಬೆಚ್ಚಿ ಬಿದಿದ್ದು, ಅತ ಅಧಿಕಾರಿಗಳ ಕೈಗೆ ಒಂದು ಡೈರಿ ಕೊಟ್ಟಿದ್ದಾನೆ. ಅದರಲ್ಲಿ ಹಣದ ಬಗ್ಗೆ ಹಾಗೂ ಸುಮಾರು 15 ಜನ ರಾಜಕಾರಣಿಗಳ ಹೆಸರು ಬರೆದುಕೊಟ್ಟಿದ್ದಾನೆ ಎನ್ನಲಾಗಿದೆ.
ಇದರಲ್ಲಿ ಕೆಲ ಶಾಸಕರು ,ಕಾರ್ಪೋರೇಟರ್ ಗಳು ಇದ್ದಾರೆ. ಮನ್ಸೂರ್ ಖಾನ್ ಬರೆದುಕೊಟ್ಟಿರುವ ಡೈರಿಯಲ್ಲಿ ಕಾಂಗ್ರೆಸ್, ಜೆಡಿಎಸ್  ಪಕ್ಷದ ಕೆಲ ನಾಯಕರ ಹೆಸರುಗಳು ಇವೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com