ಈ ಬಗ್ಗೆ ಮಾಹಿತಿ ನೀಡಿರುವ ಮೃತ ದೇಹ ಪತ್ತೆ ಮಾಡಿದ ಸ್ಥಳೀಯ ಮೀನುಗಾರ ರಿತೇಶ್ ಎಂಬುವವರು, 'ನಾವು ನದಿಯಲ್ಲಿ ಹೋಗುವಾಗ ಬೆಳಗ್ಗೆ 7 ಗಂಟೆ ಸುಮಾರಿನಲ್ಲಿ ಹೊಯ್ಗೆ ಬಜಾರ್ ಪ್ರಾಂತ್ಯದಲ್ಲಿ ದೇಹವೊಂದು ಕಾಣಿಸಿತ್ತು. ಕೂಡಲೇ ನಾವು ಅಲ್ಲಿಗೆ ಹೋದಾಗ ಅದು ಸಿದ್ಧಾರ್ಥ್ ಅವರದ್ದೇ ಎಂದು ಶಂಕೆಯಾಯಿತು. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದೆವು ಎಂದು ಹೇಳಿದ್ದಾರೆ.