ಚಾಮರಾಜನಗರ: ಮಲೈ ಮಹದೇಶ್ವರ ಬೆಟ್ಟದ ರಸ್ತೆಯ ಮಧ್ಯೆ ಬಂದು ನಿಂತ ಕಾಡಾನೆ ಸ್ವಾಮೀಜಿಗಳ ಕಾರನ್ನು ತಡೆದು ಸುಮಾರು ಅರ್ಧ ಗಂಟೆ ಸತಾಯಿಸಿದೆ.
ಸಾಲೂರು ಮಠದ ಗುರುಸ್ವಾಮಿ ಶ್ರೀಗಳಉ ಮಂಗಳವಾರ ಬೆಳಗ್ಗೆ ಕಾರಿನಲ್ಲಿ ದೇವಾಸ್ಥಾನಕ್ಕೆ ತೆರಳುತ್ತಿದ್ದರು ಈ ವೇಳೆ ರಸ್ತೆಯ ಅಡ್ಡಕ್ಕೆ ಬಂದ ಕಾಡಾನೆ ಕಾರು ಹೋಗಲು ದಾರಿ ಬಿಡದೆ ಆಕ್ರೋಶದಿಂದ ವರ್ತಿಸಿದೆ ಎನ್ನಲಾಗಿದೆ,
ಆನೆ ಅಡ್ಡ ಬರುತ್ತಿರುವುದನ್ನು ನೋಡಿದ ಚಾಲಕ ಸ್ವಾಮೀಜಿಗಳಿದ್ದ ಕಾರನ್ನು ನಿಲ್ಲಿಸಿದ್ದಾನೆ, ಜೊತೆಗೆ ಆನೆ ವಾಪಸ್ ಹೋಗುವವರೆಗೂ ಕಾರಿನ ಎಂಜಿನ್ ಚಾಲನೆಯಲ್ಲಿಟ್ಟು ಕಾಯುತ್ತಿದ್ದರು.
ಇತ್ತೀಚೆಗೆ ಇದೇ ಆನೆ ಇಬ್ಬರನ್ನು ಗಾಯಗೊಳಿಸಿತ್ತು ಎಂದು ವರದಿಯಾಗಿತ್ತು. ಸೋಮವಾರ ಸಂಜೆ ಬಂಡೀಪುರ ಅರಣ್ಯದಲ್ಲಿ ಸಫಾರಿ ಮಾಡುತ್ತಿದ್ದ ಪ್ರವಾಸಿಗರ ಮೇಲೆ ಆನೆಯೊಂದು ದಾಳಿ ನಡೆಸಿದ್ದನ್ನು ನಾವಿಲ್ಲಿ ಸ್ಮರಿಸಬಹುದಾಗಿದೆ.