ಎಂ.ಎಂ.ಕಲ್ಬುರ್ಗಿ ಹತ್ಯೆ ಕೇಸ್ ನಲ್ಲಿ ಆರೋಪಿ ಕೃಷ್ಣಮೂರ್ತಿ ಬೈಕ್ ಓಡಿಸಿದ್ದು, ಗಣೇಶ್ ಮಸ್ಕಿನ್ ಗುಂಡು ಹಾರಿಸಿದ್ದಾಗಿ ದೃಢಪಟ್ಟಿದೆ. ಸಿಸಿಟಿವಿ ಕ್ಯಾಮೆರಾದಲ್ಲಿ ದೊರೆತ ದೃಶ್ಯಗಳಲ್ಲಿ ಕೃಷ್ಣಮೂರ್ತಿ ಹಾಗೂ ಗಣೇಶ್ ಮುಖ ಚಹರೆ ಹೊಂದಾಣಿಕೆ ಇದೆ. ಬಂಧನದ ಬಳಿಕ ಬೆಂಗಳೂರಿಗೆ ಕರೆತಂದಿರುವ ಎಸ್ಐಟಿ ತಂಡ, ಬೆಂಗಳೂರಿನಲ್ಲಿ ರಹಸ್ಯ ಸ್ಥಳದಲ್ಲಿ ಆರೋಪಿ ಕೃಷ್ಣಮೂರ್ತಿಯನ್ನು ತೀವ್ರ ವಿಚಾರಣೆ ನಡೆಸುತ್ತಿದೆ.