ಶಿವಕುಮಾರ್ ಕೆಲಸಕ್ಕೆ ಹೋದ ನಂತರ ಮನೆಗೆ ಬರುತ್ತಿದ್ದ ಚೇತನ್ ದಿವ್ಯಾ ಜೊತೆ ಸಮಯ ಕಳೆಯುತ್ತಿದ್ದ. ಈ ವಿಚಾರ ತನ್ನ ಗಂಡಿಗೆ ಎಲ್ಲಿ ಗೊತ್ತಾಗಿ ಬಿಡುತ್ತದೆ ಎಂದು ಭಾವಿಸಿ ಮಾರ್ಚ್ 29ರಂದು ಅಣ್ಣ ಚೇತನ್ ಜೊತೆ ಮದುವೆಗೆ ಹೋಗಿ ಅಂತ ಗಂಡನನ್ನು ಕಳುಹಿಸಿದ್ದಾಳೆ. ಮಾರ್ಗಮಧ್ಯೆ ಚೇತನ್ ರೌಡಿಶೀಟರ್ ಭರತ್, ಕೃಷ್ಣ ಜೊತೆ ಸೇರಿ ಶಿವಕುಮಾರ್ ಕತ್ತು ಹಿಸುಕಿ ಹತ್ಯೆ ಮಾಡಿದ್ದಾರೆ. ನಂತರ ಅಪಘಾತವೆಂದು ಪ್ರಕರಣ ದಾಖಲಿಸಿದ್ದರು.