ಬೆಂಗಳೂರು: ಖ್ಯಾತ ಪತ್ರಕರ್ತ ಪಿ. ಲಂಕೇಶ್ ಮಗಳು, ಪತ್ರಕರ್ತೆ, ಸಾಮಾಜಿಕ ಹೋರಾಟಗಾರ್ತಿಯಾಗಿದ್ದ ಗೌರಿ ಲಂಕೇಶ್ ಹತ್ಯೆಗೆ ಸಂಬಂಧಿಸಿ ಕರ್ನಾಟಕ ಸ್ಪೆಷಲ್ ಇನ್ವೆಸ್ಟಿಗೇಶನ್ ಟೀಮ್ (ಎಸ್ಐಟಿ) 7.65 ಎಂಎಂ ಪಿಸ್ತೂಲ್ ಅನ್ನು ವಶಕ್ಕೆ ಪಡೆದಿದೆ. ಈ ಪಿಸ್ತೂಲನ್ನು ಹಂತಕರು ಗೌರಿ ಹತ್ಯೆಗಾಗಿ ಬಳಸಿದ್ದು ಕೊಲೆಗೂ ಮುನ್ನ ಹಂತಕ ಈ ಪಿಸ್ತೂಲಿನಿಂದ ತರಬೇತಿ ಪಡೆದಿದ್ದನೆಂದು ತಿಳಿದುಬಂದಿದೆ.