ಮೈಸೂರು: ಉಡಾನ್ ಯೋಜನೆಯಡಿ ಮೈಸೂರು - ಬೆಂಗಳೂರು ನಡುವೆ ಹೊಸ ವಿಮಾನ ಹಾರಾಟ ಸೇವೆ ಶುಕ್ರವಾರದಿಂದ ಆರಂಭವಾಗಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಜಿ. ಟಿ. ದೇವೇಗೌಡ ಅವರು ಇಲ್ಲಿನ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಇದಕ್ಕೆ ಚಾಲನೆ ನೀಡಿದರು.
ಉಡಾನ್ ಯೋಜನೆಯಲ್ಲಿ ಏರ್ ಇಂಡಿಯಾದ ಅಂಗಸಂಸ್ಥೆಯಾದ ಅಲೈಯನ್ಸ್ ಏರ್ ಸಂಸ್ಥೆ ವಾರದಲ್ಲಿ ಐದು ದಿನಗಳ ಕಾಲ ಮೈಸೂರು -ಬೆಂಗಳೂರು ನಡುವೆ ಸಂಚರಿಸಲಿದೆ.