ಮಳೆಕೋಟೆ ಗ್ರಾಮದ ಯುವತಿಗೆ ದೊಡ್ಡಗೊಳದ ಯವಕ ಮಂಜುನಾಥ್ ಎಂಬುವರೊಂದಿಗೆ ವಿವಾಹ ನಿಶ್ಚಯವಾಗಿರುತ್ತದೆ. ಆದರೆ ಯುವತಿಗೆ ಮದುವೆ ಇಷ್ಟವಿರಲಿಲ್ಲ. ಹೀಗಾಗಿ ತನ್ನ ಪ್ರಿಯಕರ ಜೊತೆ ಓಡಿ ಹೋಗುವ ಸಲುವಾಗಿ ಮೈಮೇಲೆ ವಿಷವನ್ನು ಹಾಕಿಕೊಂಡು ತಾನು ವಿಷ ಕುಡಿದಿರುವುದಾಗಿ ಪೋಷಕರಿಗೆ ತಿಳಿಸಿದ್ದಾಳೆ. ಇದರಿಂದ ಕಂಗಾಲಾದ ಪೋಷಕರು ಆಕೆಯನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದು ಅಲ್ಲಿ ತನ್ನ ಅತ್ತೆಯ ಮಗನ ಜೊತೆ ಪರಾರಿಯಾಗಿದ್ದಾಳೆ.