ಇನ್ನು ಹೀಗೆ ಕುಂಟು ನೆಪ ಹೇಳಿ ಗುರುವಾರ ಸಂಜೆಯೇ ಮನೆ ಬಿಟ್ಟಿದ್ದ ಅಂಜನಾ ನೇರವಾಗಿ ಸಂದೀಪನನ್ನು ಭೇಟಿಯಾಗಿದ್ದಾಳೆ. ಇಬ್ಬರೂ ಕೊಠಡಿಯೊಂದನ್ನು ಬಾಡಿಗೆಗೆ ಪಡೆದಿದ್ದಾರೆ. ಆದರೆ ಅಲ್ಲಿ ಇಬ್ಬರ ನಡುವೆ ಯಾವುದೋ ಕಾರಣದಿಂದ ಮಾತಿಗೆ ಮಾತು ಬೆಳೆದು ಜಗಳವಾಗಿದೆ. ಆಗ ಜಗಳ ವಿಕೋಪಕ್ಕೆ ಹೋಗಿದ್ದು ಆರೋಪಿ ಸಂದೀಪ್ ಆಕೆಯನ್ನು ವಯರ್ ನಿಂದ ಕುತ್ತಿಗೆ ಬಿಗಿದು ಕೊಂದಿದ್ದಾನೆ. ಆ ಬಳಿಕ ಆಕೆಯ ಮೊಬೈಲ್, ಕರಿಮಣಿ ತಾಳಿ, ಬಾಡಿಗೆ ಕೊಠಡಿ ಕೀ ಸಮೇತ ಪರಾರಿಯಾಗಿದ್ದಾನೆ. ಮೊಬೈಲ್ ನೆಟ್ ವರ್ಕ್ ಆಧಾರದಲ್ಲಿ ತನಿಖೆ ಕೈಗೊಂಡ ಪೋಲೀಸರು ಆರೊಪಿ ಶಿರಸಿ ಮಾರ್ಗವಾಗಿ ಸಿಂಧಗಿಗೆ ತೆರಳಿರುವುದನ್ನು ಪತ್ತೆ ಮಾಡಿದ್ದಾರೆ.ಕೂಡಲೇ ಸಿಂಧಗಿ ಪೋಲೀಸರ ಸಹಕಾರದೊಡನೆ ಶನಿವಾರವೇ ಲಾಡ್ಜ್ ಒಂದರಲ್ಲಿದ್ದ ಆರೋಪಿಯನ್ನು ಬಂಧಿಸಿದ್ದಾರೆ.