ಆದರೆ ಆರೋಪಿಗಳನ್ನು ಬಂಧಿಸಿದ ಕೆಲವೇ ಸಮಯದಲ್ಲಿ ಪೋಲೀಸರೆದುರು ಪ್ರತ್ಯಕ್ಷರಾದ ಗ್ರಾಮಸ್ಥರು ಆರೋಪಿಗಳನ್ನು ಬಿಡುವಂತೆ ಒತ್ತಾಯಿಸಿದ ಘಟನೆ ನಡೆದಿದೆ. ಗ್ರಾಮದ ಮುಖ್ಯಸ್ಥ ಮಾತನಾಡಿ ಗ್ರಾಮದೇವತೆಗಾಗಿ ಅವರು ಪ್ರಾಣಿಯನ್ನು ಕೊಂದಿದ್ದಾರೆ. ನಮ್ಮ ಗ್ರಾಮ ದೇವತೆ ಕಾಡಿನ ಪ್ರಾಣಿಯನ್ನು ಕೋರಿದ್ದಳು ಎಂದು ಪೋಲೀಸರೆದುರು ವಾದಿಸಿದ್ದಾರೆ. ಆದರೆ ಪೋಲೀಸರು ವನ್ಯಜೀವಿ ಬೇಟೆ ನಿಷೇಧದ ಕಾನುನು ಕುರಿತು ವಿವರಿಸಿದ್ದಾರೆ.ಆಗ ಗ್ರಾಮಸ್ಥರು "ನಮ್ಮ ದೇವತೆ ನಿಮ್ಮನ್ನು ಸುಮ್ಮನೆ ಬಿಡಲ್ಲ" ಎಂದು ಪೋಲೀಸರಿಗೆ ಧಮ್ಕಿ ಹಾಕಿದ್ದಾರೆ.