ಕಾರವಾರ: ಉತ್ತರ ಕನ್ನಡ ಜಿಲ್ಲೆ ಮಲೆನಾಡು ಬಾಗದ ಹಳ್ಳಿಯ ಯುವಕ, ಯುವತಿಯರಿಗೆ ವಿವಿಧ ಕಾರಣಗಳಿಂಡ ವಿವ್ಹ ಸಂಬಧಗಳು ಬರುವುದು ವಿಳಂಬವಾಗುತ್ತಿದೆ. ಆದರೆ ಮೇಧಿನಿ ಎಂಬ ಗ್ರಾಮವು ಇನ್ನಷ್ಟು ವಿಶೇಷವಾಗಿದೆ. ಬಾಸ್ಮತಿ ಅಕ್ಕಿಯಂತೆ ಪ್ರಸಿದ್ದವಾಗಿರುವ ಮೇಧಿನಿ ಅಕ್ಕಿ ಬೆಳೆಯುವುದಕ್ಕೆ ಪ್ರಸಿದ್ದವಾಗಿರುವ ಈ ಗ್ರಾಮದ ಕನೆಯಯರಿಗೆ ಸೂಕ್ತ ವಿವಾಹ ಸಂಬಂಧಗಳು ಬರುತ್ತಿಲ್ಲ. ಇದಕ್ಕೆ ಕಾರಣ ಗ್ರಾಮಕ್ಕೆ ಸರಿಯಾದ ರಸ್ತೆ ಸಂಪರ್ಕವಿಲ್ಲದಿರುವುದೇ ಆಗಿದೆ. ಗ್ರಾಮಕ್ಕೆ ಸಂಪರ್ಕಿಸುವ ರಸ್ತೆ ಅತ್ಯಂತ ಕೆಟ್ಟ ಸ್ಥಿತಿಯಲ್ಲಿರುವ ಕಾರಣ ಹೊರ ಊರುಗಳು, ಬೇರೆ ಗ್ರಾಮದವರು ಈ ಹಳ್ಳಿಯ ಯುವಕ-ಯುವತಿಯರ ಸಂಬಂಧ ಬೆಳೆಸಲು ಹಿಂದೇಟು ಹಾಕುತ್ತಾರೆ.