ಆಡಿಯೋದಲ್ಲಿ ಮಾತನಾಡಿರುವ ಮನ್ಸೂರ್ ಖಾನ್ 'ಈ ಸಂದೇಶವನ್ನು ನೀವು ಕೇಳುವ ವೇಳೆಗೆ ನಾನು ನನ್ನ ಜೀವನವನ್ನು ಅಂತ್ಯಗೊಳಿಸಿರುತ್ತೇನೆ. 12-13 ವರ್ಷಗಳಲ್ಲಿ ನಾನು ಸಂಸ್ಥೆಯನ್ನು ಕಟ್ಟಲು ಬಹಳಷ್ಟು ಶ್ರಮ ಪಟ್ಟಿದ್ದೇನೆ. ಆದರೆ, ಅಧಿಕಾರಿಗಳು, ರಾಜಕಾರಣಿಗಳು, ಎಲ್ಲರಿಗೂ ಲಂಚ ನೀಡಿ, ನೀಡಿ ಸಾಕಾಗಿ ಹೋಗಿದೆ. ಶಿವಾಜಿನಗರದ ಶಾಸಕರಿಗೆ 400 ಕೋಟಿ ರೂ ನೀಡಿದ್ದೆ. ಆದರೆ ಅವರು ವಾಪಸ್ ನೀಡಿಲ್ಲ. ಅವರಿಂದ ನನಗೆ ವಂಚನೆಯಾಗಿದೆ. ನನಗೆ ಹಣ ವಾಪಸ್ ಮಾಡುವ ಬದಲು ರೌಡಿಗಳನ್ನ ನಮ್ಮ ಆಫೀಸ್ ಗೆ ಕಳುಹಿಸುತ್ತಿದ್ದರು ಎಂದು ಆರೋಪಿಸಿದ್ದಾರೆ.