ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ, ಅಮಾಸೆಬೈಲು ಚಾರಿಟಬಲ್ ಟ್ರಸ್ಟ್, ಕರ್ನಾಟಕ ಬ್ಯಾಂಕ್ ಲಿಮಿಟೆಸ್ ಹಾಗೂ ಅಮಾಸೆಭೈಲು ಗ್ರಾಮದ ಸಂಯುಕ್ರಾಶ್ರಯದಲ್ಲಿ ಸೌರ ಗ್ರಾಮ ಯೋಜನೆಗೆ ಚಾಲನೆ ನೀಡಿ ಮಾತನಾಡಿದ, ಧರ್ಮಸ್ಥಳ ಮಂಜುನಾಥೇಶ್ವರ ದೇವಾಲಯದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು, “ಸೌರ ವಿದ್ಯುತ್ ನ ಸಮರ್ಪಕ ಬಳಕೆಯಿಂದ ವಿದ್ಯುತ್ ಪೂರೈಕೆಯ ಬಿಕ್ಕಟ್ಟು ಪರಿಹಾರವಾಗುತ್ತದೆ, ತನ್ಮೂಲಕ ದೇಶದ ಆರ್ಥಿಕಾಭಿವೃದ್ಧಿಗೂ ಸಹಾಯವಾಗುತ್ತದೆ” ಎಂದರು.