ನನ್ನಿಂದ ಹಣ ಪಡೆಯಲು ಸುಳ್ಳು ಆರೋಪಗಳನ್ನು ಮಾಡಿ ಪಿಎಂ ಕಚೇರಿ ಮತ್ತು ಆರ್ ಬಿಐಗೂ ಸುಳ್ಳು ಮಾಹಿತಿ ನೀಡುತ್ತಿದ್ದಾರೆ. ನಾನು ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದೇನೆ. ನನ್ನ ಬಳಿ ಇರುವ 500 ಕೋಟಿ ರೂ.ಮೌಲ್ಯದ ಆಸ್ತಿ ಮಾರಿ, 30 ಸಾವಿರ ಕ್ಯಾರೆಟ್ ವಜ್ರ, ಚಿನ್ನಾಭರಣ ತಮ್ಮ ಕಸ್ಟಡಿಗೆ ಪಡೆದು ಹೂಡಿಕೆದಾರರಿಗೆ ಹಣ ವಾಪಸ್ ಮಾಡಿ ಎಂದು ಮುಹಮ್ಮದ್ ಮನ್ಸೂರ್ ಖಾನ್ ಅಜ್ಞಾನ ಸ್ಥಳದಿಂದ ಆಡಿಯೋ ಬಿಡುಗಡೆ ಮಾಡಿ ನಾಪತ್ತೆಯಾಗಿದ್ದಾರೆ.