"ಜಿಲ್ಲೆಯ ರಾಜಕಾರಣಿಗಳೇ ಈ ಬಗ್ಗೆ ಗಮನ ಹರಿಸುತ್ತಿಲ್ಲ. ಕೊಡಗು ಅತಿ ಹೆಚ್ಚು ಆದಾಯ ಗಳಿಸುವ ಜಿಲ್ಲೆಗಳ ಪಟ್ಟಿಯಲ್ಲಿದೆ, ಇಲ್ಲಿಗೆ ಬರುವ ಪ್ರವಾಸಿಗರಿಗೆ ತುರ್ತು ಸೇವೆಗಳ ಅಗತ್ಯವಿದೆ ಎಂದರೂ ಇಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಸೌಲಭ್ಯ, ಟ್ರಾಮ ಕೇರ್ ಸೆಂಟರ್ ಕೂಡ ಇಲ್ಲದಂತಾಗಿದೆ. ತುರ್ತಾಗಿ ಚಿಕಿತ್ಸೆ ಕೊಟ್ಟರೂ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ಕಳಿಸಲಾಗುತ್ತದೆ. ಮಾರ್ಗ ಮಧ್ಯದಲ್ಲೇ ರೋಗಿಗಳು ಮೃತಪಟ್ಟಿರುವ ಉದಾಹರಣೆಗಳಿದ್ದು, ಕೊಡಗಿಗೆ ತುರ್ತು ಸಂದರ್ಭಗಳಲ್ಲಿ ಜೀವ ಉಳಿಸುವ ಸೌಲಭ್ಯವಿರುವ ಸ್ಪೆಷಾಲಿಟಿ ಆಸ್ಪತ್ರೆ ಬೇಕಿದೆ".