20 ಸಾವಿರಕ್ಕೂ ಹೆ್ಚ್ಚು ದೂರು ಸಲ್ಲಿಕೆಯಾದ ಬಳಿಕವೂ ಹಣ ಕಳೆದುಕೊಂಡಿರುವ ನೂರಾರು ಹೂಡಿಕೆದಾರರು ದೂರು ನೀಡಲು ಮುಂದಾಗುತ್ತಿದ್ದಾರೆ. ಶಿವಾಜಿನಗರದ ಎಎಸ್ ಕನ್ವೆಷನ್ ಹಾಲ್ ನಲ್ಲಿ 3ನೇ ದಿನವೂ ದೂರು ಸ್ವೀಕರಣೆ ಮುಂದುವರೆದಿದ್ದು, ಇಂದೂ ಕೂಡ ನೂರಾರು ಮಂದಿ ಸರತಿ ಸಾಲಲ್ಲಿ ನಿಂತು ದೂರು ಸಲ್ಲಿಕೆಗೆ ಮುಂದಾಗಿದ್ದಾರೆ. ನೆರೆಯ ರಾಜ್ಯಗಳು ಹಾಗೂ ಹೊರ ದೇಶಗಳವರೂ ಕಂಪನಿಯಲ್ಲಿ ಹೂಡಿಕೆ ಮಾಡಿ ವಂಚನೆಗೆ ಒಳಗಾಗಿದ್ದು, ಅವರೆಲ್ಲ ಕುಟುಂಬ ಸಮೇತವಾಗಿ ನಗರಕ್ಕೆ ಬಂದು ದೂರು ನೀಡುತ್ತಿದ್ದಾರೆ. ಮದುವೆ, ಮಕ್ಕಳ ವಿದ್ಯಾಭ್ಯಾಸ, ಆರೋಗ್ಯ–ಹೀಗೆ ಹಲವು ಉದ್ದೇಶಕ್ಕಾಗಿ ಹಣ ಹೂಡಿಕೆ ಮಾಡಿದ್ದ ಜನ ಈಗ ಅಕ್ಷರಶಃ ಬೀದಿಗೆ ಬಿದ್ದಿದ್ದಾರೆ.