ಇಲ್ಲಿ ಯಾವುದೇ ಪಾರದರ್ಶಕತೆ ಮತ್ತು ನಿಖರತೆ ಉಳಿದಿಲ್ಲ, ದಾಖಲಾದ ಪ್ರಾಜೆಕ್ಟ್ ಗಳ ಅವಧಿ ಮುಗಿದಿದೆ, ಅಂತಹ ಕಂಪೆನಿಗಳೊಂದಿಗೆ ವ್ಯವಹರಿಸಬೇಡಿ ಎಂದು ವೆಬ್ ಸೈಟ್ ನಲ್ಲಿ ಹಾಕುವ ಮೂಲಕ ಅಧಿಕಾರಿಗಳು ಜನರನ್ನು ಮೂರ್ಖರನ್ನಾಗಿಸಲು ಹೊರಟಿದ್ದಾರೆ. ಲಕ್ಷಾಂತರ ರೂಪಾಯಿ ಹೂಡಿಕೆ ಮಾಡಿದ ಖರೀದಿದಾರರ ಗತಿಯೇನು ಎಂದು ಕೇಳುತ್ತಾರೆ ರೇರಾ ಕರ್ನಾಟಕ ವಿಭಾಗದ ಸಂಚಾಲಕ ಎಂಎಸ್ ಶಂಕರ್.