ಕಳೆದ ನಾಲ್ಕೈದು ವರ್ಷಗಳಿಂದ ನಮಗೆ ಸಾಕಷ್ಟು ಮಳೆ ಬಂದಿಲ್ಲ. ಹಿಂದೆ, ಇಲ್ಲಿನ ಜನರು ಜಾತಿ, ಮತ, ಧರ್ಮದ ಬೇಧಗಳಿಲ್ಲದೆ ಒಟ್ಟಿಗೆ ಸಾಮರಸ್ಯದಿಂದ ಜೀವನ ನಡೆಸುತ್ತಿದ್ದರು. ಇಂದು ತಲೆಮಾರು ಬದಲಾಗಿದೆ. ಸಾಮರಸ್ಯ, ಒಗ್ಗಟ್ಟು ಕಾಪಾಡಿಕೊಳ್ಳಬೇಕಿದೆ. ನಾವು ಕೋಮು ಸೌಹಾರ್ದತೆಯನ್ನು ಕಾಪಾಡಿಕೊಂಡರೆ ದೇವರು ನಮ್ಮನ್ನು ಹರಸುತ್ತಾರೆ. ಹೀಗಾಗಿ ನಾವು ಮಾರುತಿ ದೇವಸ್ಥಾನಕ್ಕೆ ಹೋಗಿ ದೇವರಿಗೆ ಪೂಜೆ ಸಲ್ಲಿಸುತ್ತೇವೆ ಎನ್ನುತ್ತಾರೆ ರಂಜನಬಿ ಬದಿನ್.