ನಾನು ಇಂಜಿನಿಯರ್ ಬಿ.ಇ ಪದವಿ ಪಡೆದಿದ್ದೇನೆ. ನಾನು ಕೊಡಗಿನವಳು. ಅಲ್ಲದೆ ಸಿನಿಮಾದವರ ಬಗೆಗೆ ಹಗುರಾಗಿ ಮಾತನಾಡಬೇಡಿ, ಸಿನಿಮಾದವರು ಏನನ್ನು ಮಾಡಬಹುದು ಎಂಬುದನ್ನು ನಾನು ಇತ್ತೀಚೆಗೆ ಮಂಡ್ಯ ಲೋಕಸಭೆ ಚುನಾವಣೆಯಲ್ಲಿ ಕಂಡಿದ್ದೇನೆ. ಕೇಂದ್ರ ಸಚಿವೆ ಸ್ಮೃತಿ ಇರಾನಿ , ತಮಿಳುನಾಡಿನ ಸಾಕಷ್ಟು ಮಂತ್ರಿಗಳು ಸಿನಿಮಾದವರು ಹಾಗಾಗಿ ಸಿನಿಮಾ ಬಗ್ಗೆ ಕೀಳು ಭಾವನೆ ಬೇಡ" ನಟಿ ಹೇಳಿದ್ದಾರೆ.