ಇದ್ದದ್ದು ಇದ್ದಂಗೆ ಹೇಳಿದ್ರೆ ಎದ್ದು ಬಂದು ಎದೆಗೆ ಒದ್ದಂಗೆ: ಸಚಿವರ ಮಾತಿಗೆ ಹರ್ಷಿಕಾ ಪ್ರತಿಕ್ರಿಯೆ

ಇದ್ದದ್ದು ಇದ್ದಂಗೆ ಹೇಳಿದ್ರೆ ಎದ್ದು ಬಂದು ಎದೆಗೆ ಒದ್ದಂಗೆ: - ಇದು ಸಚಿವ ಸಾ.ರಾ. ಮಹೇಶ್ ಹೇಳಿಕೆಗೆ ನಟಿ ಹರ್ಷಿಕಾ ಪೂಣಚ್ಚ ಪ್ರತಿಕ್ರಿಯೆ.
ಹರ್ಷಿಕಾ ಪೂಣಚ್ಚ
ಹರ್ಷಿಕಾ ಪೂಣಚ್ಚ
ಬೆಂಗಳೂರು: ಇದ್ದದ್ದು ಇದ್ದಂಗೆ ಹೇಳಿದ್ರೆ ಎದ್ದು ಬಂದು ಎದೆಗೆ ಒದ್ದಂಗೆ: - ಇದು ಸಚಿವ ಸಾ.ರಾ. ಮಹೇಶ್ ಹೇಳಿಕೆಗೆ ನಟಿ ಹರ್ಷಿಕಾ ಪೂಣಚ್ಚ ಪ್ರತಿಕ್ರಿಯೆ. 
ಮಡಿಕೇರಿಯಲ್ಲಿ ನೆರೆ ಸಂತ್ರಸ್ಥರಿಗೆ ಸರ್ಕಾರ ನಿರ್ಮಿಸಿಕೊಟ್ಟಿರುವ ಮನೆಗಳು ಸರಿಯಾಗಿಲ್ಲ ಎಂಬ ಟೀಕೆಗೆ  ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ. ಮಹೇಶ್ ಆಕ್ಷೇಪ ವ್ಯಕ್ತಪಡಿಸಿದ್ದರು. ಇದಕ್ಕೆ ಪ್ರತಿಕ್ರಯಿಸಿರುವ ನಟಿ ಹರ್ಷಿಕಾ ಸಚಿವರಿಗೆ ಟಾಂಗ್  ಕೊಟ್ಟಿದ್ದಾರೆ.
"ಇದ್ದದ್ದನ್ನ ಇದ್ದಂತೆ ಹೇಳೀದರೆ ಎದ್ದು ಬಂದು ಎದೆಗೆ ಒದ್ದಂತೆ, ನಾನು ಇಂಜಿನಿಯರಿಂಗ್ ಪದವಿಧರೆ. ನಾನು ಯಾರನ್ನು ದೋಷಿಸಿಲ್ಲ. ಭಾರತೀಯಳಾಗಿ ನನಗೆ ಪ್ರಶ್ನೆ ಕೇಳುವ ಹಕ್ಕಿದೆ.ಚಿತ್ರರಂಗದವರೆಂದರೆ ಕೇವಲ ಸಿನಿಮಾಗಳಲ್ಲಿ ನಟಿಸುವುದಷ್ಟೇ ಅಲ್ಲ. ಬೇರೇನೂ ಮಾತನಾಡುವುದು ತಪ್ಪೆ?
"ಕೆಲವು ಮಾಡೆಲ್ ಮನೆಗಳ ಫೋಟೋ ನೋಡದೆ. ಅದು ನನಗೆ ಇಷ್ಟವಾಗಿಲ್ಲ. ಯಾಕೆಂದರೆ ಆ ಮನೆಗಳಲ್ಲಿ ಗಾಳಿ, ಬೆಳಕು ವ್ಯವಸ್ಥೆ ಸರಿಯಿರಲಿಲ್ಲ. ಶೀಟ್ ಮನೆಎಂಬಂತಿತ್ತು. ಅದಕ್ಕೆ ರಾಜ್ಯ ಸರ್ಕಾರ ಕೊಡಗು ಸಂತ್ರಸ್ಥರಿಗೆ ಅವರ ಸ್ವಾಭಿಮಾನಕ್ಕೆ ಧಕ್ಕೆಯಾಗದಂತೆ ಮನೆಗಳನ್ನು ಕಟ್ಟಿಕೊಡಲಿ ಎಂದು ನಾನು ಈ ಮಾತು ಹೇಳಿದ್ದೆ. ನಾನು ಯಾರನ್ನೂ ದೂರಿಲ್ಲ.
ನಾನು ಇಂಜಿನಿಯರ್ ಬಿ.ಇ ಪದವಿ ಪಡೆದಿದ್ದೇನೆ. ನಾನು ಕೊಡಗಿನವಳು. ಅಲ್ಲದೆ ಸಿನಿಮಾದವರ ಬಗೆಗೆ ಹಗುರಾಗಿ ಮಾತನಾಡಬೇಡಿ, ಸಿನಿಮಾದವರು ಏನನ್ನು ಮಾಡಬಹುದು ಎಂಬುದನ್ನು ನಾನು ಇತ್ತೀಚೆಗೆ ಮಂಡ್ಯ ಲೋಕಸಭೆ ಚುನಾವಣೆಯಲ್ಲಿ ಕಂಡಿದ್ದೇನೆ. ಕೇಂದ್ರ ಸಚಿವೆ ಸ್ಮೃತಿ ಇರಾನಿ , ತಮಿಳುನಾಡಿನ ಸಾಕಷ್ಟು ಮಂತ್ರಿಗಳು ಸಿನಿಮಾದವರು ಹಾಗಾಗಿ ಸಿನಿಮಾ ಬಗ್ಗೆ ಕೀಳು ಭಾವನೆ ಬೇಡ" ನಟಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com