ವಿದ್ಯುತ್ ಶಾರ್ಟ್ ಸರ್ಕ್ಯೂಟ್: ಕೋಲಾರ ಬಿಜೆಪಿ ಮುಖಂಡ ಸಾವು

ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಆದ ಕಾರಣ ಮನೆಗೆ ಬೆಂಕಿ ಹಿಡಿದು ಕೋಲಾರ ಜಿಲ್ಲಾ ಬಿಜೆಪಿ ಮುಖಂಡ ಸಾವನ್ನಪ್ಪಿರುವ ಘಟನೆ ಕೋಲಾರ ಜಿಲ್ಲೆಯಲ್ಲಿ ನಡೆದಿದೆ.
ಟಿ.ಎಸ್‌.ನಾಗಪ್ರಕಾಶ್‌
ಟಿ.ಎಸ್‌.ನಾಗಪ್ರಕಾಶ್‌
ಕೋಲಾರ: ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಆದ ಕಾರಣ ಮನೆಗೆ ಬೆಂಕಿ ಹಿಡಿದು ಕೋಲಾರ ಜಿಲ್ಲಾ ಬಿಜೆಪಿ ಮುಖಂಡ ಸಾವನ್ನಪ್ಪಿರುವ ಘಟನೆ ಕೋಲಾರ ಜಿಲ್ಲೆಯಲ್ಲಿ ನಡೆದಿದೆ.
ಕೋಲಾರದ ಬಂಗಾರಪೇಟೆ ಪಟ್ಟಣದ ಬಜಾರ್ ರಸ್ತೆಯಲ್ಲಿರುವ ಮನೆಯಲ್ಲಿ ಶಾರ್ಟ್ ಸರ್ಕ್ಯೂಟ್ ಆಗಿದ್ದು ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಟಿ.ಎಸ್‌.ನಾಗಪ್ರಕಾಶ್‌(58) ಸಾವನ್ನಪ್ಪಿದ್ದರೆ ಮನೆಯಲ್ಲಿದ್ದ ಇನ್ನೂ ನಾಲ್ವರಿಗೆ ಗಂಭೀರ ಘಾಯಗಳಾಗಿದೆ.ಶೋಭಾ, ಸ್ವರೂಪ್‌ ಅಂಕಿತಾ ಮತ್ತು ಸತ್ಯನಾರಾಯಣ ಆಸ್ಪತ್ರೆಗೆ ದಾಖಲಾಗಿದ್ದಾರೆ. 
ಭಾನುವಾರ ಮುಂಜಾನೆ ನಾಲ್ಕರ ಸುಮಾರಿಗೆ ಘಟನೆ ನಡೆದಿದ್ದು ಬೆಂಕಿ ಹೊತ್ತಿದ್ದ ಕಾರಣ ಮನೆಯಲ್ಲಿದ್ದ ಟಿವಿ ಮತ್ತಿತರೆ ವಸ್ತುಗಳು ಸುಟ್ಟುಹೋಗಿದೆ.
ಘಟನೆಯಲ್ಲಿ ನಾಗಪ್ರಕಾಶ್ ಅವರಿಗೆ ಬೆಂಕಿ ತಗುಲಿದೆ, ದಟ್ಟ ಹೊಗೆಯ ಕಾರಣ ಉಸಿರಾಡಲೂ ಕಷ್ಟವಾಗಿ ಅಸುನೀಗಿದ್ದಾರೆ. ಅವರ ಅಂತ್ಯ ಸಂಸ್ಕಾರ ಇಂದು ಸಂಜೆ ಪಟ್ಟಣದ ಸ್ಮಶಾನದಲ್ಲಿ ನೆರವೇರಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com