ಹಾಲಿ ಮೈತ್ರಿ ಸರ್ಕಾರ ಕಷ್ಟ ಪರಿಹಾರ ಭತ್ಯೆಗೆ ಹೆಚ್ಚುವರಿ 1000 ರೂ ನೀಡುವ ಮೂಲಕ ಪೊಲೀಸರ ಮನ ಗೆಲ್ಲುವ ಕೆಲಸ ಮಾಡಿದೆ. ಆದರೆ ಇದಕ್ಕೆ ಪೊಲಿಸ್ ಸಿಬ್ಬಂದಿ ಸಮಾಧಾನ ಹೊಂದಿಲ್ಲ ಎನ್ನಲಾಗಿದೆ. ಪೊಲೀಸ್ ಸಿಬ್ಬಂದಿಯ ಏಕೈಕ ಒತ್ತಾಯವಿರುವುದು ವೇತನ ಪರಿಷ್ಕರಣೆ ಕುರಿತ ಔರಾದ್ಕರ್ ವರದಿ ಜಾರಿಗೊಳಿಸುವುದಾಗಿದೆ. ಆದರೂ ರಾಜ್ಯ ಸರ್ಕಾರ ಪೊಲೀಸ್ ಸಿಬ್ಬಂದಿ ಭತ್ಯೆ ಹೆಚ್ಚಳ ಮಾಡುವ ಮೂಲಕ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ.