ಮಂಗಳೂರು: ದಂಪತಿಗಳು ಅನುಮಾನಾಸ್ಪದ ಸಾವು, ಕೊಳೆತ ಸ್ಥಿತಿಯಲ್ಲಿ ಸಿಕ್ಕ ಮೃತದೇಹಗಳು

ಮನೆಯಲ್ಲಿ ಕೊಳೆತ ಸ್ಥಿತಿಯಲ್ಲಿ ದಂಪತಿಗಳ ಮೃತದೇಹವು ಪತ್ತೆಯಾಗಿರುವ ಘಟನೆ ಮಂಗಳೂರಿನ ತೊಕ್ಕೊಟ್ಟು ಚೆಂಬುಗುಡ್ಡೆಯಲ್ಲಿ ನಡೆದಿದೆ.
ಮಂಗಳೂರು: ದಂಪತಿಗಳು ಅನುಮಾನಾಸ್ಪದ ಸಾವು, ಕೊಳೆತ ಸ್ಥಿತಿಯಲ್ಲಿ ಸಿಕ್ಕ ಮೃತದೇಹಗಳು
ಮಂಗಳೂರು: ದಂಪತಿಗಳು ಅನುಮಾನಾಸ್ಪದ ಸಾವು, ಕೊಳೆತ ಸ್ಥಿತಿಯಲ್ಲಿ ಸಿಕ್ಕ ಮೃತದೇಹಗಳು
ಮಂಗಳೂರು: ಮನೆಯಲ್ಲಿ ಕೊಳೆತ ಸ್ಥಿತಿಯಲ್ಲಿ ದಂಪತಿಗಳ ಮೃತದೇಹವು ಪತ್ತೆಯಾಗಿರುವ ಘಟನೆ ಮಂಗಳೂರಿನ ತೊಕ್ಕೊಟ್ಟು ಚೆಂಬುಗುಡ್ಡೆಯಲ್ಲಿ ನಡೆದಿದೆ.
ಬುಧವಾರ ಬೆಳಿಗ್ಗೆ ಚೆಂಬುಗುಡ್ಡೆ ನಿವಾಸಿಗಳಾದ ಪದ್ಮನಾಭ (78) ಹಾಗೂ ವಿಮಲ (65) ಮೃತದೇಹಗಳು ಪತ್ತೆಯಾಗಿದ್ದು ದಂಪತಿಗಳ ಸಾವಿಗೆ ನಿಖರ ಕಾರಣ ಪತ್ತೆಯಾಗಿಲ್ಲ.
ಮೃತ ದಂಪತಿಗಳಿಗೆ ಮೂವರು ಮಕ್ಕಳಿದ್ದು ಎಲ್ಲರೂ ಮದುವೆಯಾಗಿದ್ದಾರೆ.ಅಲ್ಲದೆ ಬೇರೆ ಮನೆ ಮಾಡಿ ವಾಸವಿದ್ದಾರೆ. ಬುಧವಾರ ಮಧ್ಯಾಹ್ನ ಮೃತ ಪದ್ಮನಾಭ ಅವರ ಅಳಿಯ ಉಮಾರಾವ್ ಮನೆಗೆ ಆಗಮಿಸಿದ್ದಾರೆ.ಆಗ ಬಾಗಿಲು ಬಡಿದರೂ ಯಾರೂ ಬಾಗಿಲು ತೆರೆದಿರಲಿಲ್ಲ. ಮನೆಯೊಳಗಿನಿಂದ ದುರ್ವಾಸನೆ, ನೊಣಗಳ ಹಾರಾಟ ಕಂಡ ಅವರು ಅನುಮಾನಗೊಂಡು ಸ್ಥಳೀಯರ ನೆರವಿನಿಂದ ಪೋಲೀಸರಿಗೆ ಮಾಹಿತಿ ತಿಳಿಸಿದ್ದಾರೆ.
ಬಾಗಿಲು ತೆರೆದು ಒಳಪ್ರವೇಶಿಸಿದ್ದ ಪೋಲೀಸರಿಗೆ ಅಡುಗೆ ಮನೆಯಲ್ಲಿ ದಂಪತಿಗಳ ಮೃತದೇಹ ಕೊಳೆತ ಸ್ಥಿತಿಯಲ್ಲಿ ಕಂಡಿದೆ.ಉಳ್ಳಾಲ ಇನ್ಸ್ ಪೆಕ್ಟರ್ ಗೋಪಿಕೃಷ್ಣ, ಪಿಎಸ್ ಐ ಗುರುವಪ್ಪ ಕಾಂತಿ ಸ್ಥಳಕ್ಕಾಗಮಿಸಿ ಪರಿಶೀಲಿಸಿದ್ದಾರೆ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com