ಪತ್ರಿಕೆಯೊಂದರಲ್ಲಿ ಫೋಟೋ ಸಮೇತ ಬಂದ ವರದಿಯನ್ನು ಪೋಸ್ಟ್ ಮಾಡಿ ಟ್ವೀಟ್ ಮಾಡಿರುವ ಅವರು, ಮುಖ್ಯಮಂತ್ರಿಗಳ ಗ್ರಾಮ ವಾಸ್ತವ್ಯದ ಬಗ್ಗೆ ನಮ್ಮ ತಕರಾರಿಲ್ಲ, ಆದರೆ ಯಾವ ಉದ್ದೇಶ ಮತ್ತು ನಿರ್ಧಾರ ಇಟ್ಟುಕೊಂಡು ಗ್ರಾಮ ವಾಸ್ತವ್ಯ ಮುಂದುವರಿಸಲು ಹೊರಟಿದ್ದಾರೆ ಎಂಬುದನ್ನು ಅವರು ಸ್ಪಷ್ಟಪಡಿಸಬೇಕು. ಸುಳ್ಳು ಭರವಸೆ ಕೊಟ್ಟರೂ ನಂತರ ಪ್ರಶ್ನೆ ಮಾಡುವವರು ಇರುವುದಿಲ್ಲ ಎಂಬ ವಿಶ್ವಾಸ ಅವರಿಗೆ ಬಂದಂತಿದೆ ಎಂದು ಆರೋಪಿಸಿದ್ದಾರೆ.