ಇನ್ನು ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಕೊರವರ್ ಹಾಗೂ ಜಿಲ್ಲಾ ಮಟ್ಟದ ನರೇಗಾ, ವಸತಿ ಯೋಜನೆ ಅಧಿಕಾರಿಗೆ ಬೆವರಿಳಿಸಿದ ಸಚಿವರು, ‘ನೀನು ಜಿಲ್ಲಾ ಮಟ್ಟದ ಅಧಿಕಾರಿಯಾಗೋಕೆ ನಾಲಾಯಕ್. ನಾವು ಹೊರಗಿನಿಂದ ಬಂದವರು, ನೀನು ಹೇಳುವುದು ನಮಗೆ ತಿಳಿಯಬೇಕು, ಜನರಿಗೂ ಅರ್ಥವಾಗೋ ಹಾಗೇ ಹೇಳಿ. ಮಾಹಿತಿ ನೀಡುವಾಗ ನೀವ್ಯಾರು ಗಾಬರಿಯಾಗಬೇಡಿ. ಸರಿಯಾಗಿ ಮಾಹಿತಿ ನೀಡಿ. ನೀವು ಗಾಬರಿಯಾದ್ರೆ ನಾವು ಗಾಬರಿಯಾಗುತ್ತೆವೆ. ನೀವು ವೀಕ್ ಆದ್ರೆ ನಾವು ವೀಕ್ ಆಗುತ್ತೆವೆ. ನಾನು ಮಾಧ್ಯಮದ ಎದಿರು ನಿಮ್ಮ ಮರ್ಯಾದೆ ತೆಗೆಯೊಲ್ಲ. ನಿಮ್ಮನ್ನ ರೀಪೇರಿ ಮಾಡೋ ಜಾಗನೇ ಬೇರೆಯಿದೆ. ಹೆದರಬೇಡಿ ಸರಿಯಾಗಿ ಮಾಹಿತಿ ನೀಡಿ ಎಂದರು.