ಬೆಂಗಳೂರಿನಿಂದ ಸಕಲೇಶಪುರ ತಾಲೂಕಿನ ಮೂಕನ ಮನೆ ಜಲಪಾತಕ್ಕೆ ನಾಲ್ವರು ಯುವಕರು ಟ್ರಿಪ್ ಬಂದಿದ್ದರು. ಎರಡು ದಿನಗಳ ಕಾಲ ಪ್ರವಾಸಕ್ಕೆಂದು ಆಗಮಿಸಿದ್ದ ಇವರು ಮಡಿಕೇರಿ ನೋಡಿಕೊಂಡು ನಂತರ ಸಕಲೇಶಪುರದ ಮೂಕನಮನೆ ಜಲಪಾತಕ್ಕಾಗಿ ಆಗಮಿಸಿದ್ದಾರೆ. ಆದರೆ ಜಲಪಾತ ಸಮೀಪ ಬಂಡೆಯೊಂದ ಮೇಲೆ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಳ್ಳ ಹೋದ ತನುಷ್ ಕಾಲು ಜಾರಿ ನೀರಿಗೆ ಬಿದ್ದಿದ್ದಾನೆ.