ಬೆಂಗಳೂರಿನಿಂದ ಕೇರಳಕ್ಕೆ ಸುಮಾರು 25 ಬಸ್ಸುಗಳು ಸಂಚರಿಸುತ್ತಿದ್ದು ಅವುಗಳಲ್ಲಿ ಬಹುತೇಕ ಬಸ್ಸುಗಳು ರಾತ್ರಿ ಹೊತ್ತಿನಲ್ಲಿ ಸಂಚರಿಸುತ್ತಿವೆ. ಕೇರಳದಿಂದ ಸಹ ಬೆಂಗಳೂರಿಗೆ ಅಷ್ಟೇ ಸಂಖ್ಯೆಯಲ್ಲಿ ಬಸ್ಸುಗಳು ಸಂಚರಿಸುತ್ತಿವೆ. ಮುಷ್ಕರದಿಂದ ಕೇರಳ-ಕರ್ನಾಟಕಕ್ಕೆ ಸಂಚರಿಸುವ ಪ್ರಯಾಣಿಕರಿಗೆ ತೊಂದರೆಯಾಗಬಾರದು ಎಂದು ಕೆಎಸ್ಆರ್ ಟಿಸಿ ನಾಲ್ಕು ಹೆಚ್ಚಿನ ಬಸ್ಸುಗಳನ್ನು ಎರ್ನಾಕುಲಂ, ತ್ರಿಶೂರ್, ಕಣ್ಣನ್ನೂರು ಮತ್ತು ಪಾಲಕ್ಕಾಡ್ ಗೆ ಕಳುಹಿಸುತ್ತಿದೆ.