ಇನ್ನು ಐಎಂಎ ಹಗರಣದ ಇದುವರೆಗಿನ ತನಿಖಾ ಪ್ರಗತಿಯ ಕುರಿತು ಅಧಿಕಾರಿಗಳು ಗೃಹ ಸಚಿವ ಎಂಬಿ ಪಾಟೀಲ್ ಅವರಿಗೆ ಮಾಹಿತಿ ನೀಡಿದ್ದಾರೆ. ಸೋಮವಾರ ರವಿಕಾಂತೇಗೌಡ ನೇತೃತ್ವದ ತಂಡ ಸಚಿವ ಎಂಬಿ ಪಾಟೀಲ್ ಜತೆಗೆ ಐಎಂಎ ಕಂಪನಿ ಹಾಗೂ ಖಾನ್ ಗೆ ಸೇರಿದ ಆಸ್ತಿ ಮುಟ್ಟುಗೋಲು ಸಂಬಂಧ ಚರ್ಚೆ ನಡೆಸಿದೆ. ಮಸೂರ್ ಖಾನ್ ಪರಾರಿ ಪ್ರಕರಣ ಕುರಿತು ಈ ತಿಂಗಳು ನಡೆವ ಸಚಿವ ಸಂಪುಟ ಸಭೆಯಲ್ಲಿಯೂ ಚರ್ಚೆಯಾಗುವ ನಿರೀಕ್ಷೆ ಇದೆ.